Thursday, November 18, 2010

ಮರ್ಯಾದೆಯಿಂದ ಖುರ್ಚಿಬಿಡಿ....

ರಾಜ್ಯ ರಾಜಕಾರಣದಲ್ಲಿ ಇತ್ತೀಚಿನ ಹಗರಣಗಳಿಂದ ಜನ ಸಾಮಾನ್ಯರೆಲ್ಲ ಅಸಹ್ಯ ಪಟ್ಟುಕೊಳ್ಳುತ್ತಿದ್ದರೆ, ತಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಮುಖ್ಯಮಂತ್ರಿಗಳು, ಅವರ ಸಂಪುಟದ ಸಹೋದ್ಯೋಗಿಗಳು ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕೋಸ್ಕರ "ಹಿಂದಿನ ಎಲ್ಲ ಮುಖ್ಯಮಂತ್ರಿಗಳು ಇಂತಹ ತಪ್ಪನ್ನು ಮಾಡಿದ್ದಾರೆ..ಇದೇನೂ ಹೊಸದಲ್ಲ" ಎಂಬಂತಹ ಭಂಡತನದ ಹೇಳಿಕೆಗಳನ್ನು ಕೊಡುತ್ತ ಸಾಗಿರುವುದು ನಿಜಕ್ಕೂ ಹೇಸಿಗೆಯ ವಿಷಯ. ನಮಗೆಲ್ಲ ಗೊತ್ತಿದೆ ಹಿಂದಿನ ಸರ್ಕಾರಗಳ್ಯಾವವೂ ಸಂಪನ್ನವಾಗಿರಲಿಲ್ಲ ಎಂದು. ಒಂದು ಮಾದರಿ ಸರಕಾರ, ಉತ್ತಮ ಆಡಳಿತ ನಮಗೆ ದೊರೆಯಬಹುದೆಂಬ ಭರವಸೆಯ ಮೇರೆಗೆ ಬಿಜೆಪಿ ಪಕ್ಷವನ್ನು ಗದ್ದುಗೆಗೆ ಏರಿಸಿದ ಮತದಾರ ಇಂದು ಭ್ರಮನಿರಸನನಾಗಿರುವುದೂ ಸಹ ಅಷ್ಟೇ ಸತ್ಯ. ಇವೆಲ್ಲದಕ್ಕೆ ಕಳಶವಿಟ್ಟಂತೆ ನಗರಕ್ಕೆ ಆಗಮಿಸಿದ ಗುಜರಾತ್ ಮುಖ್ಯಮಂತ್ರಿ "ರಾಜೀವ್ ಗಾಂಧಿ ಬೃಷ್ಟಾಚಾರವನ್ನು ನಿಯಂತ್ರಿಸಲಿಲ್ಲ" ಎಂಬಂತಹ ಔಟ್ ಡೇಟೆಡ್ ಹೇಳಿಕೆಗಳನ್ನ ನೀಡಿ ತಮ್ಮ ಭಂಡತನವನ್ನು ಸಹ ಮೆರೆದರು. ಹೌದು ಹಿಂದಿನವರೆಲ್ಲರೂ ದುಷ್ಟರು, ಭೃಷ್ಟರು, ಲಂಚಕೋರರು. ನೀವು ಸಹ ಅದನ್ನೇ ಮಾಡುವುದಾದರೆ ನೀವೇಕೆ ಮಂತ್ರಿಗಿರಿಯ ಖುರ್ಚಿಯಮೇಲೆ ಕುಳಿತುಕೊಳ್ಳಬೇಕು. ಮರ್ಯಾದೆಯಿಂದ ಇಳಿದು ಹೋಗಿ. ಯಾರಿಗೆ ಯಾರೂ ಅನಿವಾರ್ಯವಲ್ಲ. ನೀವು ರಾಜ್ಯಭಾರ ಮಾಡದೇ ಹೋದರೂ ನಾವು ಇಲ್ಲಿ ಬದುಕುತ್ತೇವೆ..ಜೀವನ ನಡೆಸುತ್ತೇವೆ.