Thursday, September 3, 2009

ಈ ನೆನಪುಗಳೇ ಹಾಗೆ....ನಮ್ಮೀ ನಿವಾಸದಲ್ಲೇ ಅಡಗಿವೆ....

ಇಟಗಿ ಈರಣ್ಣ ಅವರ "ಚಂದಕಿಂತ ಚಂದ..." ಹಾಡು ಹುಟ್ಟಿದ ಕುರಿತು ಮಣಿಕಾಂತ್ ವಿಜಯಕರ್ನಾಟಕದಲ್ಲಿ ಬರೆದ ಮೇಲೆ ನನ್ನ ಫೋನು ಒಂದು ಕ್ಷಣವೂ ಸುಮ್ಮನಿಲ್ಲ..ಪ್ರತಿ ಕ್ಷಣಕ್ಕೆ ಸುಮ್ಮನೆ ತಕರಾರು ಮಾಡುತ್ತಿದೆ...ಪುಟ್ಟ ಮಕ್ಕಳು ರಚ್ಚೆ ಹಿಡಿಯುವ ಹಾಗೆ...ಅದು ಕೂಗುವ ಕ್ಷಣಕ್ಕೆ ಎತ್ತಿಕೊಂಡು...ಮಾತನಾಡಿ...ಕೆಳಕ್ಕಿಡುವ ಮರುಕ್ಷಣವೇ ಮತ್ತೆ ಕೂಗಲು ಆರಂಭಿಸಿ ಬಿಟ್ಟಿದೆ... ಎದುರು ಮಾತನಾಡುವಂತಿಲ್ಲ..ಏಕೆಂದರೆ ಅತ್ತ ಕಡೆಯಿಂದ ಬರುತ್ತಿರುವ ಫೋನುಗಳೆಲ್ಲವೂ ಅಕ್ಕರೆಯಿಂದ ತಮ್ಮ ಅಭಿಮಾನವನ್ನು ಹೇಳುವ ಕರೆಗಳೇ...
ಇದೆಲ್ಲದರ ನಡುವೆ ಇಟಗಿ ಈರಣ್ಣ ಸಹ ಬೆಳಿಗ್ಗೆ ಫೋನಾಯಿಸಿ...ತಮ್ಮ ಅಭಿಮಾನವನ್ನು ವ್ಯಕ್ತ ಪಡಿಸಿದರು..."ಹತ್ತು ವರ್ಷಗಳ ನಂತರ ನನ್ನನ್ನು ಈ ರೀತಿಯಲ್ಲಿ ನೆನಪಿಸಿಕೊಂಡಿದ್ದಕ್ಕೆ ತುಂಬಾ ಥ್ಯಾಂಕ್ಸ್...ನಾನು ಕ್ಲಾಸನ್ನು ಸಹ ನಡೆಸಲು ಸಾಧ್ಯವಾಗದಷ್ಟು ನನ್ನ ಮೊಬೈಲ್ ರಿಂಗಣಿಸುತ್ತಿದೆ... ಮೈಸೂರಿನಿಂದ ರಮೇಶ್, ಶಿವಾಜಿರಾವ್ ಜಾಧವ್..ಮುಂತಾದವರೆಲ್ಲ ಕರೆಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ..ತುಂಬ ಚನ್ನಾಗಿ ಬರೆದಿದ್ದೀರಿ...ಅಂದ ಹಾಗೆ ರಮೇಶ್ ಮೈಸೂರಿನಲ್ಲಿ ಮತ್ತೆ ರಾವಿ ನದಿಯ ದಂಡೆಯ ಮೇಲೆ ಮಾಡಿಸುವ ತಯಾರಿಯಲ್ಲಿದ್ದಾರೆ..ಭಾಳ ಖುಷಿ ಆತು" ಎಂದು ಫೋನಿಟ್ಟರು...
ರಾವಿ ನದಿಯ ಹೆಸರನ್ನು ಕೇಳಿದ ತಕ್ಷಣ ನಾನು ಮೈ ಕೊಡವಿಕೊಂಡು ಮೇಲೆದ್ದೆ...ಅದನ್ನು ಈಗ ಮತ್ತೆ ಮಾಡಿಸಲು ಸಾಧ್ಯವಿದೆಯೇ? ಮಾಡಿಸಿದರೆ ಯಾವ ತಂಡಕ್ಕೆ ಮಾಡಿಸುವುದು ಮುಂತಾದವುಗಳನ್ನು ಚಿಂತಿಸುತ್ತಿರುವಾಗ...ನೆನಪಾಗಿದ್ದು..."ಈ ನೆನಪುಗಳೇ ಹಾಗೆ...ನಮ್ಮೀ ನಿವಾಸದಲ್ಲೇ ಅಡಗಿವೆ...."

No comments:

Post a Comment