Saturday, January 8, 2011

ಹೀಗೊಂದು ಹೊಸ ಪ್ರಯತ್ನ...




ನಿಮಗೆಲ್ಲ ಗೊತ್ತಿರುವಂತೆ ಕನ್ನಡ ಕಲಾ ಸಂಘ, ಟಿ.ಬಿ.ಡ್ಯಾಂ, ಕನ್ನಡದ ಅನನ್ಯ ಕತೆಗಾರ ಕುಂ.ವೀ ಅವರ ಬೇಲಿ ಮತ್ತು ಹೊಲ ಕಾದಂಬರಿಯನ್ನು ಪ್ರದರ್ಶಿಸುತ್ತಿದೆ. ಇದನ್ನ ರಂಗರೂಪಕ್ಕಿಳಿಸಿದವರು ಕನ್ನಡದ ಮತ್ತೊಬ್ಬ ಶ್ರೇಷ್ಠ ಪತ್ರಕರ್ತ, ನಾಟಕಕಾರ ಜಿ.ಎಚ್. ರಾಘವೇಂದ್ರ ಅವರು.

ನಾವೆಲ್ಲ ಕನ್ನಡ ಕಲಾ ಸಂಘದ ಕಲಾವಿದರು ಇದಕ್ಕಿಂತಲೂ ಸ್ವಲ್ಪ ಮುಂದುವರಿದು ಬೇಲಿ ಮತ್ತು ಹೊಲ ಕಾದಂಬರಿ ಹಾಗೂ ನಾಟಕ ಎರಡನ್ನೂ ಒಂದೇ ಗುಟುಕಿನಲ್ಲಿ ನಮ್ಮೆಲ್ಲ ರಂಗಾಸಕ್ತರಿಗೆ ಮತ್ತು ಓದುಗರಿಗೆ ಕೊಡುವ ನಿಟ್ಟಿನಲ್ಲಿ ಹೆಜ್ಜೆಹಾಕುತ್ತಿದ್ದಾರೆ. ಕುಂ.ವೀ ಅವರು ಈ ಪ್ರಯತ್ನವನ್ನು ಮುಕ್ತ ಕಂಠದಿಂದ ಪ್ರಶಂಸಿದ್ದಾರೆ. ಎಲ್ಲವೂ ಅಂದು ಕೊಂಡಂತೆ ಸಾಗಿದಲ್ಲಿ, ಇನ್ನು ಕೆಲವೇ ದಿನಗಳಲ್ಲಿ "ಬೇಲಿ ಮತ್ತು ಹೊಲ" ಕಾದಂಬರಿ ಹಾಗೂ ನಾಟಕ ಎರಡೂ ನಿಮ್ಮ ಕೈಸೇರಲಿದೆ.....

No comments:

Post a Comment