Tuesday, October 20, 2009

ಪತ್ರಕರ್ತರ ಹಪಾಪಿ ತನ!!!

ಈ ಹಿಂದೆ ನಾನು ಇದೆ ಬ್ಲಾಗ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ನಡೆದ ಅಕ್ರಮಗಳ ಬಗ್ಗೆ ಬರೆದಿದ್ದೆ...ಅದಕ್ಕೆ ಅನೇಕ ಸ್ನೇಹಿತರ ಮಿಶ್ರ ಪ್ರತಿಕ್ರಿಯೆ ಸಹ ಬಂದಿತ್ತು..ಗೆಳೆಯ ರವಿ ಹೆಗಡೆ ಅವರು ಇಂತಹ ವಿಷಯಗಳನ್ನು ನೇರವಾಗಿ ಸಂಪಾದಕರ ಗಮನಕ್ಕೆ ತರಬೇಕಿತ್ತು ಎಂಬ ಸಲಹೆಯನ್ನು ಸಹ ನೀಡಿದ್ದರು...

ಇದೆ ತರಹದ ಮತ್ತೊಂದು ಘಟನೆ ಇತ್ತೀಚಿಗೆ ನಡೆದಿದೆ...ಕೊಪ್ಪಳದಲ್ಲಿ ನನ್ನ ಸ್ನೇಹಿತನೊಬ್ಬ ಏನ್.ಜಿ.ಓ ನಡೆಸುತ್ತಿದ್ದಾನೆ..ಅವನನ್ನು ಕೇಳಿಕೊಂಡು ಒಬ್ಬ ಪತ್ರಕರ್ತ ಬಂದು ದೀಪಾವಳಿಗಾಗಿ ಒಂದು ಜಾಹಿರಾತನ್ನು ನಮ್ಮ ಪತ್ರಿಕೆಗೆ ನೀಡುವಂತೆ ದುಂಬಾಲು ಬಿದ್ದಿದ್ದಾನೆ..ನನ್ನ ಸ್ನೇಹಿತ ಅದಕ್ಕೆ ತಮ್ಮದು ಏನ್.ಜಿ.ಓ ಆಗಿರುವುದರಿಂದ ಯಾವುದೇ ರೀತಿಯ ಜಾಹಿರಾತನ್ನು ನೀಡುವಂತಿಲ್ಲ ಎಂದು ತಿಳಿಸಿ ಹೇಳಿದ್ದಾನೆ..ಆಗ ಸುಮ್ಮನಾದ ಆ ಪತ್ರಕರ್ತ ಮಹಾಶಯ ನಾಲ್ಕು ದಿನಗಳ ನಂತರ ಪುನಃ ನನ್ನ ಗೆಳೆಯನಿಗೆ ಫೋನಾಯಿಸಿ ಜಾಹಿರಾತು ನೀಡಲು ಆಗದಿದ್ದರೆ..ನಮಗೆ ಏನಾದರು ವ್ಯವಸ್ಥೆಮಾಡಿ...ನಮ್ಮನ್ನು ನೋಡಿಕೊಳ್ಳಿ ಎಂದು ಕಾದಹತ್ತಿದಾನೆ..ಏನೇ ತಿಳಿ ಹೇಳಿದರು ಅವನು ಕೇಳುವ ಸ್ಥಿತಿಯಲ್ಲಿಲ್ಲ...ಕೊನೆಗೆ ನನ್ನ ಗೆಳೆಯ ಇದನ್ನು ನನ್ನ ಮುಂದೆ ತೋಡಿಕೊಂಡಾಗ ನಾನು ನೇರವಾಗಿ ಬೆಂಗಳುರಿನಲ್ಲಿ ಆ ಪತ್ರಿಕೆಯ ಕಚೇರಿಗೆ ಫೋನಾಯಿಸಿ ಸಂಪಾದಕರ ಗಮನಕ್ಕೆ ಈ ವಿಷಯವನ್ನು ತಂದಾಗ ಅವರು ನೇರವಾಗಿ "ನಮ್ಮ ಪತ್ರ ಕರ್ತರು ಅಂತಹ ಕೆಲಸಕ್ಕೆ ಕೈಹಾಕುವುದಿಲ್ಲ..ಅವರ ಮೇಲೆ ಅಲ್ಲ ಸಲ್ಲದ ಆರೋಪ ಮಾಡಬೇಡಿ ನಿಮಗೇನು ಬೇಕೋ ಅದನ್ನು ಮಾಡಿಕೊಳ್ಳಿ" ಎಂಬ ಉಪದೇಶವನ್ನು ನೀಡಿದರು...

ಈಗ ಹೇಳಿ ಇಂತಹ ಹಪಾಪಿ ಪತ್ರಕರ್ತರಿಗೆ ಹೇಗೆ ಪಾಠ ಕಲಿಸುವುದು?

No comments:

Post a Comment