Thursday, October 22, 2009

ಕತ್ತೆ ಕಳೆದುಕೊಂಡ ಸಿದ್ದಯ್ಯನ ನೆನಪಾದದ್ದು ಹೀಗೆ....

ದಲಿತ ಕವಿ ಸಿದ್ದಲಿಂಗಯ್ಯ ಬರೆದ ಕತ್ತೆ ಮತ್ತು ಧರ್ಮ ಕವನ ಎಲ್ಲರಿಗೂ ನೆನಪಿದೆ ಎಂದು ಭಾವಿಸಿದ್ದೇನೆ...ತನ್ನ ಸತ್ತ ಕತ್ತೆಯ ಹೂತ ಜಾಗವನ್ನು ನೋಡಲು ಹೋದ ಸಿದ್ದಯ್ಯನಿಗೆ ಆಶ್ಚರ್ಯದ ಜೊತೆಗೆ ಆಘಾತವು ಆಗುತ್ತದೆ..ಅವನನ್ನು ಗೋರಿ ದೇವರ ಹತ್ತಿರ ಸಹ ಬಿಡುವುದಿಲ್ಲ...ಸತ್ತ ಕತ್ತೆಗೆ ದೊರೆಯುತ್ತಿರುವ ಮಾನ ಮರ್ಯಾದೆಯ ಜೊತೆಗೆ ತನಗೆ ಅವಮಾನವಾಗುತಿರುವುದನ್ನು ಕಂಡು ಕ್ಷಣ ಕಾಲ ಆಘಾತವಾಗುತ್ತದೆ ಸಿದ್ದಯ್ಯನಿಗೆ...
ಕೆಲ ದಿನಗಳ ಹಿಂದೆ ನಾನು ಇದೆ ಬ್ಲಾಗ್ ನಲ್ಲಿ ನಾನು ಹೊಸಪೇಟೆಯಲ್ಲಿ ರಾತ್ರಿ ಹೊತ್ತು ತೋರಣಗಲ್ಲಿಗೆ ಹೋಗಲು ಸಾಧ್ಯವಾಗದೇ ಬಸ್ ಸ್ಟ್ಯಾಂಡ್ ನಲ್ಲಿ ಮಲಗಿದ ವಿಷಯ ಪ್ರಸ್ತಾಪಿಸಿದ್ದೆ..ಬಹುಶಃ ನಿಮಗೆ ಅದು ನೆನಪಿರಬೇಕೆಂದು ಕೊಂಡಿದ್ದೇನೆ...ಎರಡು ದಿನಗಳ ಹಿಂದೆ ನಾನು ಹೊಸಪೇಟೆಗೆ ಕೆಲಸದ ನಿಮಿತ್ತ ಹೋಗಿದ್ದಾಗ ಅಲ್ಲಿಂದ ವಾಪಸ್ ಬೆಂಗಳೂರಿಗೆ ಬರಲು ರಾತ್ರಿ ಹೊಸಪೇಟೆ ಬಸ್ ಸ್ಟ್ಯಾಂಡಿಗೆ ಬಂದೆ..ಬಸ್ ಬರಲು ಸ್ವಲ್ಪ ತಡವಿತ್ತಾದ್ದರಿಂದ ಗೆಳೆಯರೊಂದಿಗೆ ಹರಟೆ ಹೊಡೆಯುತ್ತ ಅಲ್ಲಿಯೇ ಕಾಲ ಕಳೆಯುತ್ತಾ ನಿಂತೆ..ಬಸ್ ಸ್ಟ್ಯಾಂಡ್ ಸಂಪೂರ್ಣ ಶಿಥಿಲಾವಸ್ಥೆಯಲ್ಲಿತ್ತು..ಮೊನ್ನೆ ಸುರಿದ ಭಾರೀ ಮಳೆಯಿಂದಾಗಿ ಈಗೋ ಇನ್ನೊಂದು ಕ್ಷಣಕ್ಕೋ ಕುಸಿದು ಬೀಳುವ ಹಂತಕ್ಕೆ ಅದು ಬಂದು ತಲುಪಿತ್ತು...ನನಗೆ ತಕ್ಷಣಕ್ಕೆ ಕುತೂಹಲ ತಡೆಯಲಾಗದೆ ಹತ್ತು ವರ್ಷಗಳ ಹಿಂದೆ ನನಗೆ ಆಶ್ರಯ ಕೊಟ್ಟ ಬೆಂಚ್ ಗತಿ ಏನಾಗಿದೆ ಎಂದು ನೋಡಲು ಹೋದಾಗ ಅಲ್ಲಿ ಯಾವ ಬೆಂಚು ಸಹ ಇರಲಿಲ್ಲ!!!
ಕೇವಲ ಭಿಕ್ಷುಕರು, ಜೋಳಿಗೆ ದಾಸಯ್ಯಗಳು...ನಾಯಿ, ಹಂದಿಗಳು ಆ ಸ್ಥಳವನ್ನು ಆವರಿಸಿಕೊಂಡಿದ್ದವು...ಬಸ್ ಸ್ಟ್ಯಾಂಡ್ ನಲ್ಲಿದ್ದ ಎಲ್ಲ ಬೆಂಚ್ ಗಳನ್ನೂ ನವೀಕರಣದ ಹೆಸರಿನಲ್ಲಿ ಎತ್ತಂಗಡಿ ಮಾಡಿದ್ದರು...
ಕ್ಷಣಕಾಲ ಏನನ್ನೋ ಕಳೆದುಕೊಂಡ ಅನುಭವವಾಗಿ..ಮನಸ್ಸಿಗೆ ಕಸಿವಿಸಿಯಾಯಿತು...ತಕ್ಷಣಕ್ಕೆ -
"ಮಧುಗಿರಿ ಪಟ್ಟಣಕೆ ಸಿದ್ದಯ್ಯನೆಂಬಗಸ
ಹೆಂಡಿರು ಮಕ್ಕಳಿಲ್ಲ ಏಕಾಕಿ
ಸಿದ್ದಯ್ಯನಿಗೆ ಕತ್ತೆಯು ಅವನ ಒಡನಾಡಿ..." ಹಾಡು ನೆನಪಾಗಿ..ಬೆಂಗಳೂರು ತಲುಪುವ ತನಕ ಅದರದೇ ಗುನುಗುವಿಕೆ.....

No comments:

Post a Comment