Friday, February 26, 2010

ಹೀಗೊಂದು ಗಂಭೀರ ಚರ್ಚೆ...

ಗೆಳೆಯ ಮಣಿಕಾಂತ್ - ಅವಧಿ ಬ್ಲಾಗ್ ನಲ್ಲಿ ಯಡಿಯೂರಪ್ಪನವರ ಕುರಿತು, ಗಣಿ ಪರವಾನಗಿ ಕುರಿತು ಅವರ ನಿಲುವುಗಳ ಬಗ್ಗೆ ಗಂಭೀರವಾದ ಪತ್ರ ಬರೆದಿದ್ದಾರೆ.
ಮಣಿಯ ಪತ್ರ ಓದಲು ಇ ಕೆಳಗಿನ ಲಿಂಕನ್ನು ಕ್ಲಿಕ್ಕಿಸಿ...
ಮಣಿಯ ಪತ್ರಕ್ಕೆ ನನ್ನ ಅಭಿಪ್ರಾಯ ಹೀಗಿದೆ...
ನಮ್ಮ ನಾಡಿನ ಮುಖ್ಯ ಮಂತ್ರಿಗಳಿಗೆ ನಿಮ್ಮ ಯಾವುದೇ ಕಾಳಜಿಗಳು ಕೇಳಿಸುವುದಿಲ್ಲ. ಅವರದು ಜಾಣ ಕಿವುಡು. ತುಘಲಕ್ ದರ್ಬಾರ ನಡೆದಿದೆ ಇಲ್ಲಿ. ಒಂದು ಪ್ರದೇಶದ ಭೌಗೋಲಿಕ ಸಂಪತ್ತು ಆ ಪ್ರದೇಶದ ಸಾಂಸ್ಕೃತಿಕ ಕಾಳಜಿಯನ್ನು, ಸಾಮಾಜಿಕ ಪ್ರಜ್ಞೆಯನ್ನು ಕಾಪಾಡುತ್ತದೆ ಎಂಬ ಮಾತು ನಮ್ಮ ಸನ್ಮಾನ್ಯ ಮುಖ್ಯ ಮಂತ್ರಿಗಳ ಪಾಲಿಗೆ ಅರಣ್ಯರೋದನವಾಗಿದೆ. ಸ್ವಲ್ಪ ದಿನ ಕಾದು ನೋಡಿ…ಇದೇ ನಮ್ಮ ಮುಖ್ಯ ಮಂತ್ರಿಗಳು ಒಂದೋ ಇದು ಮಾಧ್ಯಮಗಳ ಸೃಷ್ಟಿ ಎಂತಲೋ ಅಥವಾ ಇಂತಹ ತಪ್ಪು ಮತ್ತೆ ಪುನರಾವರ್ತನೆ ಆಗುವುದಿಲ್ಲ ಅಂತಲೋ ಹೇಳಿಕೆಕೊಟ್ಟು ತಮ್ಮ ಹೆಗಲ ಮೇಲಿನ ಭಾರವನ್ನು ಇಳಿಸಿಕೊಳ್ಳುತ್ತಾರೆ. ನಂತರ ಗುಡಿ ಗುಂಡಾರಗಳಿಗೆ ತಿರುಗಿ ತಮ್ಮ ಹರಕೆಯನ್ನು ಸಾರ್ವಜನಿಕರ ಹಣದಲ್ಲಿ ತೀರಿಸುತ್ತಾರೆ.

ಥೂ ನಿಮ್ಮ….ನಿಮಗೇನಾದರೂ ಮಾನ, ಮರ್ಯಾದೆ, ನಾಚಿಕೆಗಳ ಅರ್ಥ ತಿಳಿದಿದ್ದರೆ ನಮ್ಮ ನಾಡನ್ನು, ನಾಡಿನ ಸಂಪತ್ತನ್ನು ರಕ್ಷಿಸುವ ಕೆಲಸ ಮೊದಲು ಮಾಡಿ. ನಂತರ ನಿಮ್ಮ ಕುರ್ಚಿ ಉಳಿಸಿಕೊಳ್ಳುವ ಕಾಯಕದಲ್ಲಿ ತೊಡಗಿ.
ನೀವೂ ಪ್ರತಿಕ್ರೀಯಿಸಿ...

No comments:

Post a Comment