Wednesday, June 2, 2010

ಅಲ್ಲಿ ನೀವು ಇರಲೇ ಬೇಕು...


ನನ್ನ ಅನೇಕ ಗೆಳೆಯರು ಮೇಲಿಂದ ಮೇಲೆ ನನಗೆ ಹೇಳುತ್ತಿದ್ದರು. ನನ್ನ ಬ್ಲಾಗ್ ನಲ್ಲಿರುವ ಲೇಖನಗಳು ಒಂದೇ ಗುಟುಕಿನಲ್ಲಿ ಓದಲು ದೊರೆಯುವಂತೆ ಮಾಡು, ಅವುಗಳನ್ನು ಪುಸ್ತಕ ರೂಪದಲ್ಲಿ ಹೊರತರುವ ನಿಟ್ಟಿನಲ್ಲಿ ಪ್ರಯತ್ನಿಸು ಎಂದು ಪ್ರೀತಿಯಿಂದ ಗದರಿಸುತ್ತಿದ್ದರು. ಒಂದು ದಿನ ನಾನು ಹಾಗೇ ಸುಮ್ಮನೇ ಕುಳಿತು ಯೋಚಿಸುತ್ತಿರುವಾಗ ಇದನ್ನು ನಾನು ಯಾಕೆ ಮಾಡಬಾರದು ಎಂದೆನಿಸಿತು. ಅದರ ಫಲವೇ ಈಗ ನನ್ನ ಬ್ಲಾಗ್ ನಲ್ಲಿರುವ ಕೆಲವು ಲೇಖನಗಳು ಪುಸ್ತಕದಲ್ಲಿ ಕಾಣಿಸಿಕೊಳ್ಳಲಿವೆ.

ಬಿಡುಗಡೆಯ ದಿನಾಂಕ ಸಹ ನಿಗದಿಯಾಗಿದೆ...ಜುಲೈ ೨೯ ಟಿ.ಪಿ.ಕೈಲಾಸಂ ಅವರ ಜನ್ಮ ದಿನಾಚರಣೆ. ಹೊಸಪೇಟೆಯ ನನ್ನ ತಂಡ ಕನ್ನಡ ಕಲಾ ಸಂಘ ಇದನ್ನು ಪ್ರತಿ ವರ್ಷ ಅತ್ಯಂತ ವಿಶೇಷವಾಗಿ ಆಚರಿಸುತ್ತದೆ. ಅಂದಿನ ದಿನವೇ ಪುಸ್ತಕವನ್ನು ಬಿಡುಗಡೆ ಮಾಡುವುದೆಂದು ನಿರ್ಧರಿಸಿಯಾಗಿದೆ. ಹಿರಿಯ ಗೆಳೆಯರಾದ ಜಿ.ಎನ್. ಮೋಹನ್ ಅವರು ಇದಕ್ಕೆ ಮುನ್ನುಡಿ ಬರೆದುಕೊಡಲಿದ್ದಾರೆ. ನನ್ನ ಅಪರೂಪದ ಗೆಳೆಯ ಮಣಿಕಾಂತ್ ಅದಕ್ಕೆ ಹಿನ್ನುಡಿ ಬರೆಯಲಿದ್ದಾರೆ. ಅಂತೆಯೇ ನನ್ನ ಅನುಗಾಲದ ರಂಗಸಂಗಾತಿಗಳಾದ ದಿಲಾವರ್, ರವಿ ಕುಲಕರ್ಣಿ, ಯಶವಂತ್ ಸರದೇಶಪಾಂಡೆ, ಜಗುಚಂದ್ರ, ಡಾ. ಆಶ್ವಥ್ ಕುಮಾರ್ ಇವರು ತಮ್ಮ ಅನಿಸಿಕೆಗಳನ್ನ ಹಂಚಿಕೊಳ್ಳಲಿದ್ದಾರೆ.

ಒಟ್ಟಾರೆ ಪುಸ್ತಕವನ್ನು ವಿಭಿನ್ನವಾಗಿ ನಿಮ್ಮ ಮುಂದೆ ಇಡಬಯಸಿದ್ದೇನೆ...ಪುಸ್ತಕ ಬಿಡುಗಡೆ ಹೊಸಪೇಟೆಯಲ್ಲಿ ನಡೆಯಲಿದೆ....ನೀವೆಲ್ಲ ನನಗೆ ಗದರಿದಂತೆ ನಾನೂ ಸಹ ಈಗ ಗದರುತ್ತಿದ್ದೇನೆ....ಪುಸ್ತಕವನ್ನು ಬಿಡುಗಡೆ ಮಾಡಲು ಬನ್ನಿ...ಜುಲೈ ೨೯ ರ ಸಂಜೆ ೬ ಗಂಟೆಗೆ ಹೊಸಪೇಟೆಯ ಪಂಪ ಕಲಾ ಮಂದಿರದಲ್ಲಿ ನಿಮ್ಮನ್ನೆಲ್ಲ ನಾನು ಎದುರು ನೋಡುತ್ತಿರುತ್ತೇನೆ....


1 comment: