Friday, September 17, 2010

ಹೊಸ ನಾಟಕ ಚಿಂಗಿಯ ಗುಂಗಿನಲ್ಲಿ....

ಭಾರತದಂತಹ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಸಮಾನತೆ ಎಮ್ಬುದು ನಿಜಕ್ಕೂ ಇದೆಯಾ? ಹಾಗಾದರೆ ಎಲ್ಲಿದೆ? ಜಾತಿಗಳ ಮಧ್ಯೆ ವೈಷಮ್ಯ, ಲಿಂಗ ಬೇಧಗಳು ಮುಂತಾದವುಗಳ ಮಧ್ಯೆ ನರಳುತ್ತಿರುವ ಅಮಾಯಕರು ಕೇವಲ ರಾಜಕೀಯ ದಾಳಗಳಾಗುತ್ತಿಲ್ಲ, ಬದಲಿಗೆ ನಮ್ಮ ಸುತ್ತಮುತ್ತಲಿನವರ ವಕ್ರ ದೃಷ್ಟಿಗೆ ಬಿದ್ದು, ಅಸಹಾಯಕತೆಯಿಂದ ತಮ್ಮ ಬದುಕನ್ನು ಹಾಳು ಮಾಡಿಕೊಳ್ಳುತ್ತಿದ್ದಾರೆ. ಒಂದು ಮುಗ್ಧ ಬುದ್ಧಿಮಾಂಧ್ಯ ಹೆಣ್ಣು ಮಗು, ಅದರಲ್ಲೂ ಅತ್ಯಾಚಾರಕ್ಕೊಳಗಾಗಿ, ಏನೂ ಅರಿಯದ ಸಂದರ್ಭದಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದರೆ ಪರಿಸ್ಥಿತಿ ಹೇಗಿರುತ್ತದೆ? ಅದನ್ನು ಸಮಾಜ ಹೇಗೆ ಸ್ವೀಕರಿಸೀತು......

ಈ ಎಲ್ಲಾ ಪ್ರಶ್ನೆಗಳಿಗೆ ಮುನಿರಾಬಾದಿನ ಗೆಳೆಯರಾದ ಡಾ. ಅಶ್ವಥ್ ಕುಮಾರ್ ಅವರು ತಮ್ಮ ಹೊಸ ನಾಟಕದಲ್ಲಿ ಉತ್ತರಿಸಿದ್ದಾರೆ. ಇದು ನಾನು ಕೈಗೆತ್ತಿಕೊಳ್ಳುತ್ತಿರುವ ಮುಂದಿನ ನಾಟಕ. ತುಂಬ ವಿಭಿನ್ನ ರೀತಿಯಲ್ಲಿ ಇದನ್ನು ವಿನ್ಯಾಸಗೊಳಿಸಿ ನಿಮ್ಮ ಮುಂದಿಡುತ್ತಿದ್ದೇನೆ. ನಾಳೆಯಿಂದ ಈ ನಾಟಕದ ಆರಂಭಿಕ ಹಂತದ ತಯಾರಿ ಹೊಸಪೇಟೆಯಲ್ಲಿ ಶುರು. ಪ್ರದರ್ಶನದ ದಿನಾಂಕವನ್ನು ಸಹ ನಿಮಗೆ ಇಷ್ಟರಲ್ಲಿಯೇ ತಿಳಿಸುತ್ತೇನೆ...ಬನ್ನಿ ನಾಟಕ ನೋಡಿ...

2 comments: