Friday, October 15, 2010

ಗಾಂಧೀ ಕ್ಲಾಸು ವಿಮಾನ ಏರಿದ್ದು...





ವಾಗಿಲಿಯಲ್ಲಿ ಶಿಕ್ಷಕರಾಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ಎದುರಾದ ತೊಡಕುಗಳು, ಸಾಹಸಗಾಥೆಗಳು, ಅಲ್ಲಿನ ಜನರೊಂದಿಗಿನ ಒಡನಾಟ, ಮಲ್ಲೇಪುರಂ ಮಳೆಗಾಲದ ಹೊತ್ತಿನಲ್ಲಿ ತಮ್ಮ ಚಪ್ಪಲಿಯನ್ನು ಕಳೆದುಕೊಂಡು, ಇದ್ದೊಂದೇ ಚಪ್ಪಲಿಯನ್ನು ಶುಭ್ರವಾಗಿ ತೊಳೆದುಕೊಂಡು ಕುಂವೀ ಮನೆಗೆ ಬಂದು, ಅಲ್ಲಿರುವ ಚೋಳುಗಳ ಪರಿವಾರದ ಪರಿಚಯ ಮಾಡಿಕೊಂಡದ್ದು..ಹೀಗೆ ಮುಂತಾದ ರೋಚಕ ಅನುಭವಗಳನ್ನು ಓದುತ್ತ ಹೋದಂತೆ ಮೈಮೇಲಿನ ಕೂದಲು ಎದ್ದು ನಿಲ್ಲುತ್ತಿದ್ದವು..

ಬೆಳಗಿನ ಜಾವ ಆರು ಗಂಟೆಗೆ ಹೈದರಾಬಾದ್‍ಗೆ ಹೊರಡುವ ವಿಮಾನದಲ್ಲಿ ಕುಳಿತುಕೊಂಡು "ಗಾಂಧಿ ಕ್ಲಾಸು" ಓದುತ್ತಿರುವಾಗಿನ ಅನುಭವಗಳಿವು. ನಾಗರೀಕರಣದ ಗಂಧಗಾಳಿ ಗೊತ್ತಿಲ್ಲದ, ಮಾನವ ಸಂಬಂಧಗಳ ಅರ್ಥವಿಲ್ಲದ ಊರಿಗೆ ಚುನಾವಣಾ ಕೆಲಸಕ್ಕೆಂದು, ಅದೂ ಪಂಚಾಯ್ತಿ ಚುನಾವಣಾ ಕೆಲಸಕ್ಕೆಂದು ಹೋಗಿ, ಅಲ್ಲಿ ಪ್ರತಿಮನೆಯಲ್ಲಿ ತರಕಾರಿಗಳನ್ನಿಡುವ ರೀತಿಯಲ್ಲಿ ನಾಡಬಾಂಬ್ ಗಳನ್ನಿಟ್ಟುಕೊಂಡು, ಅದನ್ನೇ ಬದುಕು ಅಂತ ಅಪ್ಪಿಕೊಂಡು ಬದುಕುತ್ತಿರುವ ಜನರಮಧ್ಯೆ ಬದುಕಿ, ರಕ್ತಪಾತಗಳನ್ನು ಕಣ್ಣಾರೆಕಂಡು ಅದನ್ನು ಯಥಾವತ್ತಾಗಿ ವಿವರಿಸುವ ಕುಂವೀ..."ಹೀಗೂ ಉಂಟೇ" ಎಂದು ಹುಬ್ಬೇರಿಸುವಂತೆ ಮಾಡುತ್ತಾರೆ....

ಇದೆಲ್ಲ ಓದುತ್ತಿದ್ದಂತೆ..."ಗಾಂಧಿ ಕ್ಲಾಸು" ಕುಂವೀ ಅವರ ಆತ್ಮಕಥೆಯೆಂಬ ಕಾದಂಬರಿಯನ್ನು ಇಡಿಯಾಗಿ ರಂಗದಮೇಲೆ ತರುವ ಯೋಚನೆಗಳು ತಲೆಯಲ್ಲಿ ತಹರೆವಾರಿಯಾಗಿ ಗಿರಕಿಹೊಡೆಯ ಹತ್ತಿದವು...ಅದೇ ಗುಂಗಿನಲ್ಲಿ "ಗಾಂಧಿ ಕ್ಲಾಸು" ಪುಸ್ತಕವನ್ನು ವಿಮಾನಿನಲ್ಲಿ ನನ್ನ ಮುಂದಿನ ಸೀಟಿನ ಹಿಂದೆ ಇರುವ ಸ್ಥಳದಲ್ಲಿ ಇಟ್ಟು ಯೋಚನೆಯಲ್ಲಿ ಮುಳುಗಿದೆ..ಮುಂದೆ ಹೈದರಾಬಾದ್ ನಿಲ್ದಾಣ ಬಂತು..ನನ್ನ ಲಗೇಜು ತೆಗೆದುಕೊಂಡು ವಿಮಾನದಿಂದ ಇಳಿದು ಹೊರನಡೆದೆ...ನಿಲಾಣದಿಂದ ಹೊರಬಂದ ನಂತರ "ಗಾಂಧಿ ಕ್ಲಾಸು" ವಿಮಾನು ಏರಿ ಅಲ್ಲಿಯೇ ಪವಡಿಸುತ್ತಿರುವುದು ಗಮನಕ್ಕೆ ಬಂತು..ತುಂಬ ಚಡಪಡಿಸಿದೆ...ಕೂಡಲೇ ನಿಲ್ದಾಣದ ಅಧಿಕಾರಿಗಳನ್ನು ಸಂಪರ್ಕಿಸಿ ನನ್ನ ಅಳಲನ್ನು ತೋಡಿಕೊಂಡು, ಪುಸ್ತಕವನ್ನು ಹಿಂತಿರುಗಿಸಲು ವಿನಂತಿಸಿದೆ...ಕೂಡಲೇ ಕಾರ್ಯತತ್ಪರರಾದ ಅಧಿಕಾರಿಗಳು ೨-೩ ಕಡೆ ಫೋನಾಯಿಸಿ, ಅರ್ಧಗಂಟೆಯ ನಂತರ ಅದನ್ನು ನನ್ನ ಕೈಗಿತ್ತು, ಒಂದು ಬಿಳಿ ಕಾಗದದ ಮೇಲೆ ನನ್ನಿಂದ ಪ್ರಾಮಿಸರಿ ನೋಟ್ ಬರೆಸಿಕೊಂಡರು.....

ಹೀಗೆ ಗಾಂಧಿ ಕ್ಲಾಸು ವಿಮಾನ ಏರಿದಂತೆಯೇ ರಂಗದ ಮೇಲೆಯೂ ಏರಲಿದೆ ಇಷ್ಟರಲ್ಲಿಯೇ !!!!!

1 comment: