Thursday, May 7, 2009

ಬದುಕು ಜಟಕಾ ಬಂಡಿ...ವಿಧಿ ಅದರ ಸಾಹೇಬ...

ಬದುಕು ಜಟಕಾ ಬಂಡಿ...ವಿಧಿ ಅದರ ಸಾಹೇಬ...ನನ್ನನ್ನು ಬಹುವಾಗಿ ಕಾಡಿದ ಸಾಲುಗಳಿವು....ಬಹುಶಃ ನಾನು ಧಾರವಾಡದಲ್ಲಿ ವಿದ್ಯಾಭ್ಯಾಸವನ್ನು ಮಾಡಿರದೆ ಹೋಗಿದ್ದರೆ, ಸಾಹಿತ್ಯ, ಸಂಗೀತ, ನಾಟಕದ ಗೀಳು ನನ್ನನ್ನು ಆವರಿಸಿಕೊಳ್ಳದೆ, ನಾನು ಕೂಡ ಹತ್ತರಲ್ಲಿ ಹನ್ನೊಂದನೆಯವನಾಗಿ ಹೊಟ್ಟೆ ಪಾಡಿಗಾಗಿ ಯಾವುದಾದರೊಂದು ಕೆಲಸ ಮಾಡಿಕೊಂಡು ಜೀವನ ಸಾಗಿಸುವ ಕರ್ಮಕ್ಕೆ ಶರಣಾಗ ಬೇಕಾಗಿತ್ತು.....

ಧಾರವಾಡದ ಜೆ.ಎಸ.ಎಸ ಮಹಾವಿದ್ಯಾಲಯದಲ್ಲಿ ವಿಜ್ಞಾನ ವಿಷಯದಲ್ಲಿ ಪದವಿ ಪಡೆದ ನಂತರ ನನ್ನ ತಲೆಯಲ್ಲಿದ್ದುದು ಎರಡೇ ವಿಚಾರಗಳು...ಒಂದು ದೆಹಲಿಯ ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಸೇರಿ ನಾಟಕದಲ್ಲಿ ಉನ್ನತ ವ್ಯಾಸಂಗ ಮಾಡುವುದು ಅಥವಾ ಪತ್ರಿಕೋದ್ಯಮದಲ್ಲಿ ಮುಂದುವರೆಯುವುದು... ಕೆಲವು ತಾಂತ್ರಿಕ ಕಾರಣಗಳಿಂದ ನನ್ನ ಪ್ರಯಾಣ ದೆಹಲಿಯತ್ತ ತಿರುಗಲಿಲ್ಲ...ಬದಲಾಗಿ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಮಾಡುವತ್ತ ಹೊರಟಿತು. ಮುಂದೆ ಬಹುಶಃ ನಾನು ಹಿಂದೆ ತಿರುಗಿ ನೋಡಿದ ದಿನಗಳಿಲ್ಲ...ನನ್ನ ಗುರಿ...ನಾನು ಏನು ಮಾಡಬೇಕೆನ್ನುವುದರ ಬಗ್ಗೆ ನನ್ನ ನಿಲುವು ಸ್ಪಷ್ಠವಾಗಿತ್ತು. ಸಂಕಷ್ಥದ ಪರಿಸ್ಥಿತಿಯಲ್ಲಿ ಅಣ್ಣ ಕೈಹಿಡಿದು ಓದಿಸಿದ... ಪುಸ್ತಕ, ಓದು, ಹೊಸ ವಿಚಾರಗಳತ್ತ ನನ್ನನ್ನು ನಾನು ತೆರೆದುಕೊಂಡಿದ್ದು, ನನ್ನ ೧೮ ನೆ ವಯಸ್ಸಿನಲ್ಲಿ ಧಾರವಾಡದ ೯೬೫ ಹಳ್ಳಿಗಳನ್ನು ತಿರುಗಾಡಿ, ಬೀದಿ ನಾಟಕಗಳನ್ನು ಮಾಡಿ, ಹಾಡು ಹೇಳಿ...ಸಾಕ್ಷರತಾ ಅಂದೋಲನದಲ್ಲಿ ಪಾಲ್ಗೊಂಡು ಅನೇಕರ ಹುಬ್ಬೇರುವಂತೆ ಮಾಡಿದ್ದು ಈಗ ಇತಿಹಾಸ...

ಎಲ್ಲರ ಬದುಕಿನಲ್ಲಿ ಆಗಿರುವಂತೆ ನನ್ನ ಬದುಕಿನಲ್ಲಿ ಸಹ ಕೆಲವು ಘಟನೆಗಳು ನಡೆದಿವೆ...ಅವು ನಿಮಗೆ ತೀರ ಸಿನಿಮೀಯವಾಗಿ ಕಂಡರೆ ಆಶ್ಚರ್ಯವೇನಿಲ್ಲ...ಆ ಎಲ್ಲ ಘಟನೆಗಳಿಗೆ ನನ್ನೊಂದಿಗೆ ಇದ್ದ ಅನೇಕ ಸಂಗಾತಿಗಳೇ ಸಾಕ್ಷಿ..ಅವುಗಳಲ್ಲಿನ ಕೆಲವು ಸಂಗತಿಗಳನ್ನು ತಮ್ಮ ಮುಂದೆ ಬಿಚ್ಚಿಡುವ ಪ್ರಯತ್ನವನ್ನು ಮಾಡುತ್ತಿರುವೆ...ನಿಮ್ಮ ಅನಿಸಿಕೆಗಳಿಗೆ ಸದಾ ಸ್ವಾಗತ...

2 comments: