Sunday, June 7, 2009

ಹದಿನಾರು ವರ್ಷಗಳ ನಂತರ ಸಿಕ್ಕ ಅಪರೂಪದ ಸಂಗಾತಿ..

"ಹುಟ್ಟಿಸಿದ ದೇವರು ಹುಲ್ಲು ಮೇಯಿಸಲಾರ ಎಂಬ ಮಾತು ನಿನ್ನ ಪಾಲಿಗೆ ಸುಳಾಯ್ತಲ್ಲೇ ಸೋಮಾಲಿಯ...." ನಾನು ಮೇಲಿಂದ ಮೇಲೆ ಮೆಲಕು ಹಾಕುವ ಕವನಗಳ ಸಾಲುಗಳಿವು...

ನಮ್ಮ ಕಾಲೇಜಿನ ದಿನಗಳಲ್ಲಿ ನಾವು ನಾಟಕ, ಪ್ರಗತಿಪರ ಚಿಂತನೆ, ಚರ್ಚೆ ಮುಂತಾದ ವಿಷಯಗಳ ಕುರಿತು ಆಲೋಚಿಸುತ್ತಿರುವಾಗ ಧಾರವಾಡದ ನಮ್ಮ ಗುಂಪಿಗೆ ಬಂದು ಸೇರಿದ ಗೆಳೆಯ ಪ್ರಮೋದ್ ತುರ್ವಿಹಾಳ ಬರೆದ ಕವನದ ಸಾಲುಗಳಿವು... ಈ ಕವನವನ್ನು ತಂದು ನಮ್ಮ ಮುಂದೆ ಅವನು ಓದುತಿದ್ದರೆ ನಾವೆಲ್ಲ ಗೆಳೆಯರು ಕುತೂಹಲ ಭರಿತರಾಗಿ ಅದನ್ನ ಆಲಿಸುತ್ತಿದ್ದೆವು...

ಪ್ರಮೊದನಿಗು ಸಹ ಆಗ ನಮ್ಮಷ್ಟೇ ವಯಸ್ಸು....ಸಮಾನ ಮನಸ್ಕರು ಒಂದೆಡೆ ಸೇರಲು ಈ ರೀತಿಯ ಕವನಗಳು ಸಾಕು ಎಂಬುದನ್ನು ಅವನು ಸಾಬೀತು ಪಡಿಸಿದ್ದ.....ನಿಧಾನವಾಗಿ ಅವನ ಪರಿಚಯವಾಗುತ್ತ ಹೋದಂತೆ...ಅವನ ಜೀವನ ಸಹ ಪರಿಚಯವಾಗುತ್ತ ಹೋಯಿತು... ಅವನೊಂದು ರೀತಿಯ ಭಗ್ನ ಪ್ರೇಮಿ...ಆದರೆ ತನ್ನ ಜೀವನವನ್ನು ಅದರಿಂದ ಹಾಳುಮಾಡಿ ಕೊಲ್ಲದೆ..ಆಳವಾದ ಅಧ್ಯಯನಕ್ಕೆ ಇಳಿದ....ಬುಧ್ಧ ಬಸವ ಮಾರ್ಕ್ಸ್, ಲೆನಿನ್...ಮುಂತಾದವರನ್ನು ಓದಿದ ಅವುಗಳ ಬಗ್ಗೆ ಮಾತನಾಡತೊಡಗಿದ... ಸಮಯ ಸಿಕ್ಕರೆ ಸಾಕು ನಮ್ಮನ್ನು ಹುಡುಕಿಕೊಂಡು ಬಂದು ಮತ್ತೆ ಹೊಸ ವಿಚಾರಗಳ ಕುರಿತು ಮಾತುಗಳ ಸಂಭ್ರಮ...

ನಮ್ಮ ಬಹುತೇಕ ನಾಟಕಗಳಲ್ಲಿ ಆತ ನಟನಾಗಿ, ಸಂಘತಕನಾಗಿ ಭಾಗವಹಿಸಿದ..ನಾವು ತಿನುತ್ತಿದ್ದ ಚುರುಮುರಿ...ಗಿರ್ಮಿತ್... ಅವನು ತಿನುತ್ತಿದ್ದ...ಮುಂದೆ ನಾವು ನಮ್ಮ ವಿದ್ಯಾಭ್ಯಾಸವನ್ನು ಮುಗಿಸಿ..ಕೆಲಸ ಆರಿಸಿಕೊಂಡು ಬೇರೆ ಬೇರೆ ಊರುಗಳಿಗೆ ವಲಸೆ ಬಂದಾಗ ಅವನ ಸಂಪರ್ಕ ತಪ್ಪಿ ಹೋಯಿತು...

ಸುಮಾರು ಹದಿನಾರು ವರ್ಷಗಳ ನಂತರ ಮೊನ್ನೆ ದಿನಾಂಕ ೫-೦೬-೨೦೦೯ ರಂದು ಧಾರವಾಡದಲ್ಲಿ ಮತ್ತೆ ಸಿಕ್ಕ.... ತುಂಬ ಬದಲಾಗಿದ್ದ... ವಿಚಾರಗಳಲ್ಲಿ ಅಲ್ಲ...ತನ್ನ ರೂಪದಲ್ಲಿ.. ಸ್ವಲ್ಪ ದಪ್ಪಗಾಗಿದ್ದ.... ಮತ್ತೆ ನಮ ಮಾತುಗಳು ಹದಿನಾರು ವರ್ಷಗಳ ಹಿಂದಕ್ಕೆ ತಿರುಗಿತು...ಸರಿಯಾಗಿ ರಾತ್ರಿ ೮ ಗಂಟೆಗೆ ಆರಂಭವಾದ ಮಾತುಗಳು ಮುಗಿದಾಗ ಬೆಳಗಿನ ಜಾವ ೩ ಗಂಟೆ...ಅಬ್ಬ ಅದ್ಭುತ ಮಾತುಗಳು...ಮತ್ತೆ ಹೊಸ ಹೊಸ ವಿಚಾರಗಳು...ನಿಜಕ್ಕೂ ಬಹಳ ಖುಷಿ ಕೊಟ್ಟ ಘಳಿಗೆ ಅದು...

ಅವನೇ ಆ ದಿನಗಳಲ್ಲಿ ಬರೆದ ಒಂದು ಚಿಕ ಹನಿಗವನ ವನ್ನು ಅವನ ಮುಂದೆ ನಾನು ಹೇಳಿದಾಗ ಅವನ ಕಣ್ಣಂಚಿನಲ್ಲಿ ಹನಿ ನೀರು ಬಂದಿದ್ದನ್ನು ಗಮನಿಸಿ ನಾನೂ ಸಹ ಸ್ವಲ್ಪ ಭಾವುಕನಾದೆ....

"ತಳವಿಲ್ಲದ ಪಾತ್ರೆ ಎಂದು ತಿಳಿದಿದ್ದರೆ ನಿನ್ನ ಪ್ರೀತಿ
ಸುರಿಯುತ್ತಿದ್ದೇನೆ ಅದಕ್ಕೆ ಪ್ರೇಮ ಪಾಕ?"

No comments:

Post a Comment