Sunday, June 14, 2009

"ಇತಿ ನಿನ್ನ ಅಮೃತಾ" ಜೊತೆಗೆ ಎರಡು ಮಾತು...






"ಜತೆಗಿರುವನು ಚಂದಿರ" ನಾಟಕದ ಯಶಸ್ಸು, ನನ್ನ ಮುಂದಿನ ನಾಟಕದ ತಯಾರಿಗೆ ಬುನಾದಿಯಾಗಿದೆ... ಹಿರಿಯರಾದ ಜಯಂತ್ ಕಾಯ್ಕಿಣಿ ಬರೆದಿರುವ (ಅನುವಾದಿಸಿರುವ) "ಇತಿ ನಿನ್ನ ಅಮೃತಾ" ಇಷ್ಟರಲ್ಲಿಯೇ ಕೈಗೆತ್ತಿಕೊಳ್ಳಲಿದ್ದೇನೆ....ಗೆಳೆಯ ಕಿರಣ್ ಗೋಡ್ಖಿಂಡಿ ಅದಕ್ಕೆ ಸಂಗೀತ ನೀಡಲು ಒಪ್ಪಿದ್ದಾರೆ...ಅದನ್ನು ಓದುತ್ತ ಹೋದಂತೆ ಅದರ ಪೀಠಿಕೆ ಸಿಧ್ಧವಾಗಿದ್ದು ಹೀಗೆ....

ಅದೊಂದು ವಿಚಿತ್ರ ಕುತೂಹಲ...ಯಾರಿಗಾದರು ಬಂದ ಪತ್ರವನ್ನು ಕದ್ದು ಓದುವ....ಕೊನೆ ಪಕ್ಷ ಕದ್ದು ನೋಡುವ...ಯಾರಿಂದ ಬಂದಿದೆ...ಏನು ಬರೆದಿದ್ದಾರೆ...ಮುಂತಾದವುಗಳನ್ನು ತಿಳಿದುಕೊಳ್ಳುವ ಕನಿಷ್ಥಮಟ್ಟದ ಕುತೂಹಲ ಎಲ್ಲರಲ್ಲಿಯೂ ಇದ್ದೆ ಇರುತ್ತದೆ...ತೋರಿಕೆಗಾಗಿ ನಾವು ತೀರ ಸಭ್ಯರಂತೆ... ಪ್ರಾಮಾಣಿಕರಂತೆ ವ್ಯವಹರಿಸಲು ಪ್ರಯತ್ನಿಸಿದರೂ, ನಾವು ಬೆತ್ತಲೆಯಾಗುತ್ತ ಹೋದಂತೆ ನಮ್ಮ ಬೇರೊಂದು ಸಾಮ್ರಾಜ್ಯ ತೆರೆದುಕೊಲ್ಲುವುದಂತು ನಿಜ...

ಅದರಲ್ಲೂ ಒಬ್ಬ ಹುಡುಗ-ಹುಡುಗಿ ವಿನಿಮಯಿಸಿಕೊಂಡ ಪತ್ರಗಳು ಅನೇಕ ಕಥೆಗಳನ್ನು ಬಿಚ್ಚಿಡುತ್ತವೆ... ಅವು ಕೇವಲ ಪ್ರೇಮ ಪತ್ರಗಳೇ ಆಗಿರಬೇಕಾ...ಗೆಳೆತನದಲ್ಲಿ ಒಂದು ಹೆಣ್ಣು - ಗಂಡು ಪತ್ರ ವಿನಿಮಯ ಮಾಡಿಕೊಳ್ಳಲೆಬಾರದಾ...ಗೆಳೆತನ ನಿಧಾನವಾಗಿ ಪ್ರೇಮಕ್ಕೆ ತಿರುಗಿ ಅಲ್ಲಿಯೂ ಸಹ ಪತ್ರಗಳ ವಿನಿಮಯ ಶುರುವಾದರೆ ನಮ್ಮ ಸಮಾಜಕ್ಕೆ ಇರುವ ಕುತೂಹಲ ಎಂತಹದು? ನಮ್ಮ ಮಡಿವಂತಿಕೆ ಸಮಾಜ ಅದನ್ನು ಹೇಗೆ ಸ್ವೀಕರಿಸೀತು... ಮುಂತಾದ ಪ್ರಶ್ನೆಗಳು ನನ್ನ ತಲೆಯಲ್ಲಿ ಗಿರಕಿ ಹೊಡೆಯುತ್ತಿರುವಾಗಲೇ...ನನ್ನ ಕಣ್ಣ ಮುಂದೆ "ಇತಿ ನಿನ್ನ ಅಮೃತಾ" ಹಾಯ್ದು ಹೋದದ್ದು ಮತ್ತು ಅದಕ್ಕೊಂದು ಮೂರ್ತ ರೂಪ ಕೊಟ್ಟು ಅದನ್ನು ನಿಮ್ಮ ಮುಂದೆ ಬಿಚ್ಚಿಡಲು ಸಾಧ್ಯವಾದದ್ದು.... ಇನ್ನು ಮುಂದೆ ನೀವುಂಟು.....ನಿಮ್ಮ ಅಮೃತಾ ಉಂಟು....

No comments:

Post a Comment