Friday, October 16, 2009

ಹೊಸ ನಾಟಕಕ್ಕೆ ಕುಂ.ವೀ ಮುನ್ನುಡಿ!



ಮೊನ್ನೆ ದಿನಾಂಕ ೭ ರಂದು ಗೆಳೆಯ ಪ್ರಮೋದ್ ಬೆಳಿಗ್ಗೆ ೭ ಗಂಟೆಗೆ ಫೋನ್ ಮಾಡಿ "ಗೆಳೆಯ..ನಾನು ಬೆಂಗಳೂರಿಗೆ ಬಂದೇನಿ...ಕುಂ.ವೀ ಬಂದಾರ..ಸ್ವಲ್ಪ ಬಂದು ಹೋಗು" ಅಂದ...ನಾನು ಬಹುವಾಗಿ ಪ್ರೀತಿಸುವ ಸಾಹಿತಿ ಕುಂ.ವೀ...ಅವರ ಹೆಸರು ಕೇಳಿದ ತಕ್ಷಣವೇ ರೋಮಾಂಚನಗೊಂಡೆ...ಅವರನ್ನು ಹತ್ತಿರದಿಂದ ಕಾಣಬೇಕು..ಮಾತನಾಡ ಬೇಕು ಎಂಬ ಬಹುದಿನದ ತುಡಿತ ಇಂದು ನೆರವೇರಲಿದೆ ಎಂದು..ಅವರನ್ನು ಭೇಟಿ ಮಾಡಲು ಹೊರಟೆ.. ಎಂದಿನಂತೆಯೇ ಬೆಂಗಳೂರು ಅಂದು ಸಹ ಇಡೀ ಜಗತ್ತಿನ ಜವಾಬ್ದಾರಿಯೆಲ್ಲ ತನ್ನ ತಲೆಯ ಮೇಲೆ ಬಿದ್ದಿದೆ ಎನ್ನುವಂತೆ ವರ್ತಿಸುತ್ತಿತ್ತು...ತುಂಬಿದ ಬಸುರಿಯರಂತೆ ತಿರುಗುತ್ತಿದ್ದ ಬಸ್ಸುಗಳ ಮಧ್ಯೆ ನಾನು ಹಾಗೋ....ಹೀಗೋ ನನ್ನ ಕಾರನ್ನು ಓದುಸುತ್ತ ಕುಂ.ವೀ. ಇದ್ದ ಆನಂದರಾವ್ ಸರ್ಕಲ್ಲಿನ ಹತ್ತಿರವಿದ್ದ ದ್ವಾರಕಾ ಲಾಡ್ಜ್ ಗೆ ಹೊರಟೆ...

ಲಾಡ್ಜ್ ಗೆ ಬಂದಾಗ ಕುಂ.ವೀ ತಮ್ಮ ಲ್ಯಾಪ್ ಟಾಪ್ ಮುಂದೆ ಅದೇನೋ ಬರೆಯುತ್ತಾ ಕುಳಿತಿದ್ದರು...ಪ್ರಮೋದ್ ನನ್ನನ್ನು ಅವರಿಗೆ ಪರಿಚಯಿಸಿದ ತಕ್ಷಣವೇ ಎದ್ದು ನಿಂತು..ಸ್ವಾಗತಿಸಿ...ತಮ್ಮ "ಆರೋಹಣ" ಕಾದಂಬರಿಯ ನಿದುಗದೆ ಸಮಾರಂಭದ ಆಮಂತ್ರಣ ಪತ್ರಿಕೆಯನ್ನು ಕೈಗಿತ್ತು ಅದಕ್ಕೆ ಬರಲೇ ಬೇಕೆಂದು ಫರ್ಮಾನು ಹೊರಡಿಸಿಬಿಟ್ಟರು...ಅವರ ಮಾತು, ನಯ-ವಿನಯ, ಸರಳತೆ ಎಲ್ಲವು ನನಗೆ ಅಚ್ಚರಿಯ ವಿಷಯವಾಗಿದ್ದವು..ಕೇವಲ ಅರ್ಧಗಂಟೆಯಲ್ಲಿ ಕುಂ.ವೀ ತುಂಬಾ ಹತ್ತಿರದವರೆನಿಸಿಬಿಟ್ಟರು...ನನ್ನನ್ನು ಅವರಿಗೆ ಪರಿಚಯಿಸುವ ಮೊದಲೆ ಪ್ರಮೋದ್ ಅವರಿಗೆ ನನ್ನ ಬೆಗ್ಗೆ ಎಲ್ಲಾ ಹೇಳಿಬಿಟ್ಟಿದ್ದ...ಹೀಗಾಗಿ ನನ್ನ ಬಗ್ಗೆ ಮೊದಲೆ ತಿಳಿದುಕೊಂಡಿದ್ದ ಕುಂ.ವೀ..ನನ್ನ ಆಸಕ್ತಿಯ ವಿಷಯಗಳ ಕುರಿತು ಮಾತನಾಡಲಾರಂಭಿಸಿದರು..ಕತೆ, ಹಾಡು, ನಾಟಕ, ಹೀಗೆ ಎಲ್ಲಾ ವಿಷಯಗಳ ಕಡೆಗೆ ನಮ್ಮ ಚರ್ಚೆ ಮುಖ ಮಾಡಿತು..

ಅವರೊಂದಿಗೆ ಮಾತನಾಡುತ್ತಾ ನಾನು ಹೊಸ ನಾಟಕ ಬರೆಯುತ್ತಿರುವುದಾಗಿ ಹೇಳಿದೆ..ಅದರ ಸಂಕ್ಷಿಪ್ತ ರೂಪವನ್ನು ಅವರಲ್ಲಿ ಹೇಳಿಕೊಂಡೆ..ತುಂಬಾ ಖುಷಿಯಿಂದ ಕುಂ.ವೀ "ಬೇಗ ಬರೀರಿ..ನಮ್ಮ ಭಳಾರೆ ಪುಸ್ತಕಂ ನಿಂದನೆ ಅದನ್ನ ಪ್ರಕಾಶಿಸೋಣ" ಎಂದು ಬಿಟ್ಟರು...ನನಗೆ ಆಕಾಶಕ್ಕೆ ಮೂರೇ ಗೇಣು..ನನ್ನ ಮೊದಲ ನಾಟಕ ಕೃತಿ ಅದೂ ಹೆಸರಾಂತ ಸಾಹಿತಿಯೊಬ್ಬರ ಪ್ರಕಾಶನದಿಂದ ಪ್ರಕಟಗೊಳ್ಳುತ್ತಿರುವ ಸಂಭ್ರಮವನ್ನು ನೆನೆದು ಪುಳಕಿತನಾದೆ...ಅವರೊಂದಿಗೆ ಇದ್ದ ಮೂರು ದಿನವು ಆ ಹೊಸ ನಾಟಕದ ಕುರಿತ ವಿಚಾರಗಳು ತಲೆಯಲ್ಲಿ...

ಅಂದ ಹಾಗೆ ಅದರ ಕೆಲವು ಟಿಪ್ಪಣಿಗಳನ್ನು ಇನ್ನು ಮುಂದೆ ನಿಯತವಾಗಿ ಇಲ್ಲಿ ಬರೆಯುವೆ...ಪ್ರತಿಕ್ರೀಯಿಸಿ ಪ್ಲೀಸ್!!

2 comments:

  1. neevu maataadida ella vivaravannooo bareyiri sir...
    baraha innoooo odabeku anta aaseyinda iruvaagale mugidu hoytalla?

    ReplyDelete