Monday, June 29, 2009

ರಂಗದ ಮೇಲೆ ಬಂದನೆಂದರೆ ಈತ ದೈತ್ಯ!!!


















೧೯೯೨ ರಲ್ಲಿ ಧಾರವಾಡದ ಅಭಿನಯ ಭಾರತಿ ತಂಡಕ್ಕೆ ಗೆಳೆಯ ಪ್ರಮೋದ್ ಶಿಗ್ಗಾಂವ್ ಚಂದ್ರಶೇಖರ್ ಕಂಬಾರರ ಸಾಂಬಶಿವ ಪ್ರಹಸನ ಎಂಬ ನಾಟಕವನ್ನು ನಿರ್ದೇಶಿಸುತ್ತಿದ್ದರು....ಅದಕ್ಕೆ ಸಂಗೀತ ನಿರ್ದೇಶಿಸುವ ಜವಾಬ್ದಾರಿಯನ್ನು ನನ್ನ ತಲೆಯ ಮೇಲೆ ಹೊರಿಸಿದ್ದರು...

ನಾನು ಬಹಳ ಆಸ್ಥೆವಹಿಸಿ, ಖುಷಿಯಿಂದ ಸಂಗೀತ ಸಂಯೋಜಿಸಿದ ನಾಟಕ ಅದು...ತುಂಬಾ ಖುಷಿ ಕೊಟ್ಟ ನಾಟಕ ಅದಾಗಿತ್ತು...ಆಗ ನಾವು ನಾಟಕ ಮಾಡುವ ಸಮಯದಲ್ಲಿ ಅನೇಕ ನಿರ್ದೇಶಕರು ನಟನೆಯ ವಿಷಯ ಬಂದರೆ ನಟರಾಜ್ ಎಣಗಿಯನ್ನು ಉದಾಹರಿಸುತ್ತಿದ್ದರು... ನಟರಾಜನನ್ನು ಮುಖತಃ ಭೇಟಿಯಾಗಿರಲಿಲ್ಲ...ಅವರ ಕೆಲವು ನಾಟಕಗಳನ್ನು ನೋಡಿದ್ದೆವಷ್ಥೆ..."ಸಾಂಬಶಿವ ಪ್ರಹಸನ" ನಾಟಕದ ಪ್ರದರ್ಶನಕ್ಕೆ ಇನ್ನು ಕೇವಲ ನಾಲ್ಕು ದಿನ ಬಾಕಿ ಇರುವಾಗ ಪ್ರಮೋದ್ ನಮಗೆ ನಾಳೆ ಒಬ್ಬ ಮುಖ್ಯ ವ್ಯಕ್ತಿ ನಾಟಕ ವೀಕ್ಷಿಸಲು ಬರಲಿದ್ದಾರೆ....ಎಲ್ಲರು ಸರಿಯಾದ ಸಮಯಕ್ಕೆ ತಾಲೀಮಿಗೆ ಆಗಮಿಸಿ ಉತ್ತಮ ರೀತಿಯಲ್ಲಿ ರಂತ್ರು ನೀದಬೇಕೆಮ್ದು ತಾಕೀತು ಮಾಡಿದ್ದ...
ಎಂದಿನಂತೆ ಮಾರನೆಯ ದಿನ ನಾಟಕದ ಆರಂಭಕ್ಕೆ ಮೊದಲೇ ಗೆಳೆಯ ಬಂಡು ಕುಲಕರ್ಣಿ ಹಾಗು ಅವನ ಜೊತೆ ಮತ್ತೊಬ್ಬರು ಆಗಮಿಸಿದ್ದರು...ನಾಟಕ ಶುರುವಾಯ್ತು....ಯಾವುದೇ ತೊಂದರೆ ಇಲ್ಲದೆ ನಾಟಕದ ರಂತ್ರು ಮುಗಿಯಿತು...ಎಲ್ಲ ನಟರು ಸರ್ಕಲ್ ನಲ್ಲಿ ಬಂದು ಕುಳಿತಾಗ ಪ್ರಮೋದ್ ಇನ್ನೊಬ್ಬನ ಪರಿಚಯವನ್ನು ಮಾಡಿದರು ಮತ್ತು ಅವರೇ ನಟರಾಜ್ ಏಣಗಿ...
ನಾವು ನಾಟಕದಲ್ಲಿ ಗಮನಿಸದ ಕೆಲವು ಸೂಕ್ಷ್ಮ ವಿಷಯಗಳನ್ನು ಪ್ರಸ್ತಾಪಿಸಿ ಅದರ ಬಗ್ಗೆ ಬಹಳ ಅರ್ಥಪೂರ್ಣವಾಗಿ ಮಾತನಾಡಿದರು...ಅಂದಿನಿಂದ ನನ್ನ ಮತ್ತು ನಟರಾಜ್ ಎಣಗಿಯ ಒಡನಾಟ ಶುರುವಾಯ್ತು...
ಅವರೊಬ್ಬ ಅದ್ಭುತ ನಟ...ರಂಗದ ಮೇಲೆ ಬಂದನೆಂದರೆ ಎಂತಹ ಸಮುಹವನ್ನಾದರು ತನ್ನ ತೆಕ್ಕೆಗೆ ಎಲೆದುಕೊಂಡುಬಿಡಬಲ್ಲ ದೈತ್ಯ... ಅದೊಂದು ವಿಶೇಷ ಕಲೆ ಅವನಿಗೆ ಲಭಿಸಿತ್ತು...ರಂಗದ ಮೇಲೆ ಅವನಿಗಿರುವ ಸಮಯದ ಕಾಳಜಿಯನ್ನು ಯಾರಾದರು ಮೆಚ್ಚಲೇ ಬೇಕು...
೧೯೯೫ ರಲ್ಲಿ ಕ.ವಿ.ವಿ ಯುವಜನೋತ್ಸವದಲ್ಲಿ ಬುರ್ಜ್ವಾ ಜಂಟಲ್ ಮ್ಯಾನ್ ಎಂಬ ನಾಟಕದ ಪ್ರದರ್ಶನ ಅದೂ ಗಾಂಧೀ ಭವನದಲ್ಲಿ...ಮೊದಲೇ ಅದೂ ಒಂದು ಗೋಡೌನ್ ತರಹ ಇತ್ತು...ಇನ್ನು ಅಲ್ಲಿ ನಾಟಕ ಮಾಡಿದವರ ಪಾಡು ದೇವರಿಗೆ ಪ್ರೀತಿ ಎಂದು ನಾವು ಅಂದು ಕೊಳ್ಳುತ್ತಿದ್ದಂತೆಯೇ ನಾಟಕ ಆರಂಭವಾಯಿತು...ಮೊದಲೇ ಹುಡುಗರ ಗುಂಪು...ಎಲ್ಲರ ಕೇಕೆ..ಶಿಳ್ಳೆಗಳು ಮುಗಿಲು ಮುಟ್ಟ ತೊಡಗಿತು... ತಕ್ಷಣ ನಟರಾಜ್ ರಂಗವನ್ನು ಪ್ರವೇಶಿಸಿದರು..."ನಾವು ಮಾತಾಡಿದ್ದು ನಿಮಗ ಕೆಳಸ ಬೇಕು ಅಂದ್ರ ಸ್ವಲ್ಪ ಸುಮ್ಮನ ......." ಎನ್ನುತ್ತಿದ್ದಂತೆಯೇ ಇಡೀ ಸಭಾಂಗಣ ಸ್ಥಬ್ಧವಾಯ್ತು...ಮುಂದೆ ನಾಟಕ ಮುಗಿಯುವ ವರೆಗೆ ಯಾರು ಸಹ ತಮ್ಮ ಉಸಿರನ್ನು ಹೊರಕ್ಕೆ ಬಿಡುವ ಪ್ರಯತ್ನವನ್ನು ಮಾಡಲಿಲ್ಲ.... ಅಂತಹ ಅದ್ಭುತ ನಟ ನಟರಾಜ್...
ಮುಂದೆ ಅವರೇ ನಿರ್ದೇಶಿಸಿದ ನಟ ಸಾಮ್ರಾಟ ನಾಟಕ ನೋಡಿದಾಗ ಸಹ ವಿಭಿನ್ನ ರೀತಿಯ ಅನುಭವ ವಾಯ್ತು...ಅದರಲ್ಲಿ ಒಂದು ಮಾತು ಬರುತ್ತದೆ...ಅದೂ ತನ್ನ ಹೆಂಡತಿಗೆ ಹೇಳುವ ಮಾತು..ತಮ ಉರು ಬಿಟ್ಟು ಮಗನ ಹತ್ತಿರ ಇರಲು ಬರುವ ಸಂನಿವೆಶ್..ಊರಿಗೆ ಬಂದಾಗ ಮಗನ ಮನೆಯ ಬಾಗಿಲಿಗೆ ಕೀಲಿ ಜಡಿದಿರುತ್ತದೆ...ಅದನ್ನು ನೋಡಿ ಅವರು ಹೇಳುತ್ತಾರೆ..... "ನಾವು ನಮ್ಮ ಮಗನಿಗೆ ತಾರ್ ಕಲಿಸೆವೇನೋ ಖರೆ ಅದೂ ಅವರ ಮನಿಗೆ ಮುಟ್ಟಿರತದ ಆದ್ರ ಅವರ ಮನಸ್ಸಿಗೆ ಅದೂ ಮುಟ್ಟಿರ ಬೇಕಲ್ಲ..." ಯಾವನ ಕಣ್ಣಲ್ಲಿ ಆದರೂ ನೀರು ಬರಬೇಕು.... ಅಂತಹ ಅದ್ಭುತ ನಟನೆ ಅವರದು...
ಅವರ ನಟನೆಯನ್ನು ಸವಿಯ ಬೇಕಾದರೆ ಅವರು ಇತ್ತೀಚೆಗೆ ಅಭಿನಯಿಸಿದ "ನಾ ತುಕಾರಾಂ ಅಲ್ಲ" ನಾಟಕವನ್ನು ನೋಡಿ....

1 comment:

  1. This comment has been removed by a blog administrator.

    ReplyDelete