Wednesday, August 5, 2009

ಕನಸು ಕುತೂಹಲಗಳ ಮಧ್ಯೆ....



ಈ ಕನಸುಗಳ ಬಗ್ಗೆ ನನಗೆ ವಿಚಿತ್ರ ಕುತೂಹಲ...ಅವು ಹೇಗೆ ಬೀಳುತ್ತವೆ, ಏಕೆ ಬೀಳುತ್ತವೆ...ಮುಂತಾದವುಗಳ ಬಗ್ಗೆ ನಾನು ಆಗಾಗ ಚಿಂತಿಸುತ್ತಿರುತ್ತೇನೆ...



ನನ್ನ ಗೆಳೆಯನೊಬ್ಬನಿದ್ದಾನೆ... ಶಾಂತರಾಜು ಪೋಲಿಸ್ ಪಾಟಿಲ್ ಎಂದು ಜಿಂದಾಲ್ ನಲ್ಲಿ ನಾನಿರುವಾಗ ನನ್ನೊಂದಿಗಿದ್ದ...ಅವನು ಮೂಲತಃ ಇಂಜಿನೀಯರ್...ಆದರು ಸಹ ಅದು ಹೇಗೋ ಗೊತ್ತಿಲ್ಲ ನನ್ನ ಮತ್ತು ಅವನ ಗೆಳೆತನ ಬಹು ಬೇಗ ಗಟ್ಟಿಯಾಯ್ತು ಮತ್ತು ಅವನು ತನ್ನ ಜೀವನದ ಪ್ರತಿಯೊಂದು ಘಳಿಗೆಗಳನ್ನು ನನ್ನೊಂದಿಗೆ ಯಾವಾಗಲು ಚರ್ಚಿಸುತ್ತಿರುತ್ತಾನೆ...ಅವನೀಗ ತನ್ನ ಕುಟುಂಬ ಸಮೇತನಾಗಿ ಅಮೆರಿಕದಲ್ಲಿದ್ದಾನೆ...ಅವನೀಗ ಅಮೆರಿಕಕ್ಕೆ ಹೋಗಿ ೯ ವರ್ಷಗಳೇ ಕಳೆದಿವೆ...ಆದರು ನಿರಂತರ ಸಂಪರ್ಕದಲ್ಲಿದ್ದಾರೆ....ಈಗ ಇವನ ಪ್ರಸ್ತಾಪ ಏಕೆ ಬಂದಿತೆಂದರೆ...ನಾಲ್ಕೈದು ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಅವನೊಂದು ಮನೆ ಕಟ್ಟಿಸಿದ....ಅದರ ಗೃಹ ಪ್ರವೇಶಕ್ಕೆ ಆಮಂತ್ರಣ ಪತ್ರಿಕೆಯನ್ನು ಮುದ್ರಣಕ್ಕೆ ಕೊಡುವುದಿತ್ತು..ತಕ್ಷಣ ನನ್ನ ಮನೆಗೆ ದೌಡಾಯಿಸಿದವನೇ..."ಧನು ನನ್ನ ಮನಿಗೆ ಕನಸು ಅಂತ ಹೆಸರಿಡಬೇಕು ಅಂತ ಮಾಡೆನಿ..ನಿನಗ ಎನನಸ್ತೈತಿ?" ಎಂದ...ನಾನು ತಕ್ಷಣ ಏನನ್ನು ಚಿಂತಿಸದೆ ಒಳ್ಳೆಯ ಹೆಸರು ಇದು ಎಂದು ಬಿಟ್ಟೆ....ನೋಡಿ ಕನಸುಗಳಿಗೆ ಎಷ್ಟೊಂದು ಕಲ್ಪನೆಗಳಿವೆ....



ಕನಸುಗಳಿಗೆ ಸಂಬಂಧಪಟ್ಟಂತೆ ನನ್ನ ಎರಡು ಅನುಭವಗಳನ್ನು ನಿಮ್ಮ ಮುಂದೆ ಹಂಚಿಕೊಳ್ಳಲು ಇಷ್ಟ ಪಡುತ್ತೇನೆ....ಈ ಎರಡು ಘಟನೆಗಳು ತೀರ ಭಿನ್ನ ವಾಗಿದ್ದು..ಎರಡರಲ್ಲಿಯೂ ಸಹ ನೀವು ವೈರುಧ್ಯಗಳನ್ನು ಕಾಣಬಹುದಾಗಿದೆ....



ಮೊದಲನೆಯದು...



ನಾನು ಹತ್ತನೇ ತರಗತಿಯ ಅಂತಿಮ ಪರೀಕ್ಷೆ ಬರೆಯುತ್ತಿದ್ದೆ...ಆವತ್ತು ಸಮಾಜ ವಿಜ್ಞಾನ ವಿಷಯದ ಪರೀಕ್ಷೆಯಿತ್ತು...ಮೊದಲಿನಿಂದಲೂ ಇತಿಹಾಸ ಓದುವುದೆಂದರೆ ನನಗೆ ಒಂದು ತರಹದ ಅಲರ್ಜಿ...ಅಕ್ಷರಶಃ ನಾನು ಏನನ್ನು ಓದಿರಲಿಲ್ಲ...ಹಾಗೆಯೆ ಪರೀಕ್ಷೆ ಬರೆಯಲು ಹೋದೆ..ಅಂದು ಪರೀಕ್ಷೆಗೆ ಎಕ್ಸಾಮಿನರ್ ಆಗಿ ಕಾತೋಟಿ ಎಂಬ ತಿಚರ್ ಬಂದಿದ್ದರು.ಅವರು ಧಾರವಾಡದಲ್ಲಿ ನಮ್ಮ ಮನೆಯ ಹತ್ತಿರವೇ ಇರುತ್ತಿದ್ದರು ಮತ್ತು ನನ್ನ ತಾಯಿಯ ಅತ್ಯಂತ ಆಪ್ತ ಸ್ನೇಹಿತರಾಗಿದ್ದರು....ಪರೀಕ್ಷೆ ಆರಂಭವಾಯಿತು..ಪ್ರಶ್ನೆ ಪತ್ರಿಕೆ ನೋಡಿದರೆ ಅದರಲಿ ನನಗೇನು ಅರ್ಥವಾಗುತ್ತಿಲ್ಲ...ಏನು ಬರೆಯಬೇಕೆಂದು ತಿಳಿಯುತ್ತಿಲ್ಲ....ಸುಮ್ಮನೆ ಬರೆಯುವವನಂತೆ ನಟಿಸಿ..ಕುಳಿತುಕೊಂಡೆ...ಕಾತೋಟಿ ಮೇಡಂ ನನ್ನ ಹತ್ತಿರ ಬಂದವರೇ ಪರಿಸ್ಥಿತಿಯನ್ನು ತಿಳಿದುಕೊಂಡವರೇ.. ನನ್ನ ಮಗ್ಗುಲಲ್ಲಿ ಬಂದು ನಿಂತು ಇಡೀ ಪತ್ರಿಕೆಯ ಉತ್ತರವನ್ನು ಹೇಳಿದರು....ಮುಂದೆ ನಾನು ಆ ವಿಷಯದಲ್ಲಿ ಪಾಸಾದೆ..ಆ ವಿಚಾರ ಬೇರೆ...ಈಗ ನಾನು ಎಸ್.ಎಸ್.ಎಲ್.ಸಿ ಮುಗಿಸಿ ೨೩ ವರ್ಷಗಳೇ ಕಳೆದಿವೆ...ನನಗೆ ಈಗಲೂ ಆಗಾಗ ಕನಸು ಬೀಳುತ್ತಿರುತ್ತದೆ....ನಾಳೆ ಪರೀಕ್ಷೆ ಇದೆ...ಸಮಾಜ ವಿಜ್ಞಾನ ವಿಷಯ.ಅದನ್ನು ಓದಬೇಕು...ಮುಂತಾದ ವಿಚಿತ್ರ ಕನಸುಗಳು....ತಕ್ಷಣ ನನಗೆ ಏನೋ ಒಂದು ತರಹದ ಕಸಿವಿಸಿ....ಹಾಸಿಗೆಯಿಂದ ಎದ್ದು ಕುದುತ್ತೇನೆ....ನಂತರ ಅದು ಕನಸು ಎಂದು ತಿಳಿದು ವಿಚಿತ್ರ ರೀತಿಯ ಚಡಪಡಿಕೆ ಶುರುವಾಗುತ್ತದೆ....ಹೀಗೇಕೆ ಕನಸುಗಳು ನನಗೆ ಬೀಳುತ್ತಿವೆ ತಿಳಿಯುತ್ತಿಲ್ಲ....

ಎರಡನೆಯದು:

ನನ್ನಜ್ಜಿ ನನ್ನನ್ನು ತುಂಬಾ ಪ್ರೀತಿಸುತಿದ್ದರು...ಅವರು ಬೆಳಗಾವಿ ಜಿಲ್ಲೆಯ ಇಟಗಿ ಗ್ರಾಮದಲ್ಲಿ ವಾಸಿಸುತ್ತಿದರು...೮೪ ವರ್ಷ ವಯಸ್ಸಾದರೂ ಅತ್ಯಂತ ಘಾಟಿ ಮುದುಕಿ ಅದು...ಯಾರನ್ನು ತನ್ನ ಸಹಾಯಕ್ಕೆ ಕರೆಯದೆ ಊರಿಂದ ಊರಿಗೆ ಒಬ್ಬರೇ ಓಡಾಡುತ್ತಿದರು....ಅದು ೧೯೯೪ ಆಗಸ್ಟ್ ೧೪ ರ ಬೆಳಗಿನ ಜಾವ ೫.೩೦...ನನಗೆ ವಿಚಿತ್ರ ಕನಸು ಬಿಟ್ಟು...ನನ್ನ ಪ್ರೀತಿಯ ಅಜ್ಜಿ ಸತ್ತು ಹೋದ ಸುದ್ದಿ ಅದು..ನಾನಾಗ ನನ್ನ ಅಂತಿಮ ವರ್ಷದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿಯನ್ನು ಓದುತ್ತಿದ್ದೆ..ಧಾರವಾಡದಲ್ಲಿ ಚಿಕ್ಕ ರೂಂ ಮಾಡಿಕೊಂಡು ಇರುತ್ತಿದ್ದೆ...ಈ ಕನಸು ಬಿದ್ದ ತಕ್ಷಣ ಅಕ್ಷರಶಃ ನಾನು ಅಳುತ್ತ ಹಾಸಿಗೆ ಮೇಲೆ ಎದ್ದು ಕೂತೆ...ನಂತರ ಅದು ಕನಸು ಎಂದು ತೀಡು ಸುಧಾರಿಸಿಕೊಳ್ಳಲು ಸುಮಾರು ಅರ್ಧಗಂಟೆ ಬೇಕಾಯ್ತು...ನನ್ನ ಮುಂಜಾನೆಯ ಎಲ ಕೆಲಸಗಳನ್ನು ಮುಗಿಸಿಕೊಂಡು, ನನ್ನ ರೂಮಿನಲ್ಲಿ ಪೇಪರ್ ಓದುತ್ತ ಕುಳಿತಿದ್ದೆ..ನಾನಿದ್ದ ರೂಮಿನ ಮಾಲಿಕರಾದ ದೇಶಪಾಂಡೆ ಮಾಮಿ ಮನೆಗೆ ನನ್ನ ತಮ್ಮ ಫೋನ್ ಮಾಡಿದ್ದ..ಮತ್ತು ನನ್ನ ಅಜ್ಜಿ ಅಂದು ಮುಂಜಾನೆ ತಿರಿಹೊಗಿದಾರೆ..ತಕ್ಷಣ ಬೆಳಗಾವಿಗೆ ಬರಬೇಕು ಎಂಬ ಸಂದೇಶವನ್ನು ಕೊಟ್ಟಿದ್ದ...ನನಗೆ ಕನಸು ಬಿದ್ದ ಸಮಯದಲಿಯೇ ನನ್ನ ಅಜ್ಜಿಗೆ ಹೃದಯಾಘಾತವಾಗಿದೆ ಮತ್ತು ಅದೇ ಸಮಯಕ್ಕೆ ಅವರು ತೀರಿ ಹೋಗಿದ್ದಾರೆ...

ಈ ಎರಡು ವೈರುಧ್ಯದ ಕನಸುಗಳ ಬಗ್ಗೆ ನಾನು ಯಾವಾಗಲು ಚಿಂತಿಸುತ್ತಿರುತ್ತೇನೆ...ಉತ್ತರ ಇನ್ನು ಸಿಕ್ಕಿಲ್ಲ....



No comments:

Post a Comment