Tuesday, August 25, 2009

ಹಿರಿಯ ಮನಸ್ಸು ನೊಂದಿದೆ...ಹಾಗೇ ಓದಿಕೊಳ್ಳಿ ಸುಮ್ಮನೆ...

ಅದೇಕೋ ಗೊತ್ತಿಲ್ಲ...ಕಳೆದ ಹದಿನೈದು ದಿನಗಳಿಂದ ಹಿರಿಯರಾದ ಇಟಗಿ ಈರಣ್ಣ ಅವರು ಮುನಿಸಿಕೊಂಡಿದ್ದಾರೆ...ಮನಸ್ಸಿಗೆ ತುಂಬಾ ನೋವಾಗಿದೆಯಂತೆ......ನಾನು ಫೋನ್ ಮಾಡಿದ ತಕ್ಷಣ ಎರಡನೇ ಬಾರಿ ಅದು ಕೂಗುವುದಕ್ಕೂ ಮೊದಲೆ ಅದನ್ನು ಎತ್ತಿಕೊಳ್ಳುವ ಸ್ನೇಹಜೀವಿ, ಅಷ್ಟು ಸುಲಭವಾಗಿ ತಮ್ಮ ಮನಸ್ಸನ್ನು ನೋಯಿಸಿಕೊಳ್ಳುವುದಿಲ್ಲ ಎಂದು ನನಗೆ ಅವರು ಕಳೆದ ಹತ್ತು ವರ್ಷಗಳ ಪರಿಚಯದಲ್ಲಿ ಮನವರಿಕೆಯಾಗಿದೆ..ಇದು ಬಹುಶಃ ಗಂಭೀರವಾದ ವಿಷಯವೇ ಇರಬೇಕು...ನಾನು ಖುದ್ದಾಗಿ ಹೊಸಪೇಟೆಗೆ ಹೋಗಿ ಅವರನ್ನು ಮಾತನಾಡಿಸಿಕೊಂಡು ಬರಲು ನಿರ್ಧರಿಸಿದ್ದೇನೆ...ಅವರ ಧ್ವನಿ, ಹಿತನುಡಿ, ಶಾಯರಿ, ಗಜಲ್ ಕೇಳುತ್ತಿದ್ದರೆ, "ರಾವೀ ನದಿಯ ದಂಡೆಯ ಮೇಲೆ" ನಾಟಕಕ್ಕೆ ಅವರು ಬರೆದ ಈ ಕೆಳಗಿನ ಗಜಲ್ ನೆನಪಿಗೆ ಬರುತ್ತದೆ... ಹಾಗೆ ಓದಿಕೊಳ್ಳಿ ಸುಮ್ಮನೆ...

ನಮ್ಮ ಸುತ್ತಿನ ಸಂಬಂಧಗಳನು, ಸ್ವಲ್ಪ, ಕಿವಿಗೊಟ್ಟು ಕೇಳು!
ಏಕೆ ತುಂಬಿದೆ, ಗದ್ದಲವೂ ಇಲ್ಲಿ? ಸ್ವಲ್ಪ, ಕಿವಿಗೊಟ್ಟು ಕೇಳು!!

ಉದಯಿಸುವ ಸೂರ್ಯನ, ಹಾವ-ಭಾವಗಳ, ಕಣ್ಣಿಟ್ಟು ನೋಡು!
ಮುಳುಗುತಿಹ ಸೂರ್ಯನ-ನಿಂದೆಗಳ, ಸ್ವಲ್ಪ, ಕಿವಿಗೊಟ್ಟು ಕೇಳು!!

ನಮ್ಮೀ ನಿವಾಸದಲ್ಲೇ ಇವೆ, ವಿಶಾಲ-ಋತು-ಸಂವತ್ಸರಾದಿಗಳು!
ನೀರಗುಳ್ಳೆಗಳಂತೆ, ಒಡೆದು ಹೋಗುತಿವೆ, ಸ್ವಲ್ಪ, ಕಿವಿಗೊಟ್ಟು ಕೇಳು!!

ಏಕಿಂತು ಹಾಳು ಬಿದ್ದಿದೆ ಹೇಳು? ಈ ನಮ್ಮ ಪುಣ್ಯ - ಕಾಬಾ?!
ತೆಗೆಯಾ ಕೈಗಳನು ಕೈಯಿಂದ! ಸ್ವಲ್ಪ ಕಿವಿಗೊಟ್ಟು ಕೇಳು!!

"ನಿನ್ನ ಬಿಟ್ಟು ನಾನಿಲ್ಲ" - ಎಂಬ ನುಡಿ ಬರುತಲಿದೆ - ಒಳಗಿಂದಲೇ!
ಯಾರವರು ನುಡಿವವರು ನಮ್ಮೊಳಗೆ? ಸ್ವಲ್ಪ ಕಿವಿಗೊಟ್ಟು ಕೇಳು!!

ನಾವು ಅಡಿಯಿಡುವ ದಾರಿಯಲಿ, ಹೆಜ್ಜೆ-ಹೆಜ್ಜೆಗೂ "ನಾಸಿರ್"!
ಮಿಡಿವ ಹೃದಯವದೇನೋ, ನುಡಿಯುತಿದೆ! ಸ್ವಲ್ಪ ಕಿವಿಗೊಟ್ಟು ಕೇಳು!

1 comment:

  1. halavara kastakke midida hrudaya ivaaga yaake mounavaagide?
    itagi eeranna avaru nammella preetiya kavi,mechhina manushya.
    avara manassina novu bega maagali.
    Manikanth.

    ReplyDelete