Friday, August 7, 2009

ಮಗುವೆ ನಿನ್ನ ಹೂನಗೆ.......




ನನ್ನ ಬಹಳ ಅಪರೂಪದ ಗೆಳೆಯ ಪ್ರಮೋದ್ ತುರ್ವಿಹಾಳ್ ನೆನ್ನೆ ಹೊಸಪೇಟೆಯಲ್ಲಿ ಸಿಕ್ಕಿದ್ದ...ಸಂಜೆ ೪ ಗಂಟೆಗೆ ಆರಂಭವಾದ ನಮ್ಮ ಹರಟೆ ಒತ್ತಾಯಪೂರ್ವಕವಾಗಿ ಮುಗಿಸಿದಾಗ ಬರೋಬ್ಬರಿ ರಾತ್ರಿ ೧೦ ಗಂಟೆ..ಯಾಕಾದರೂ ಹತ್ತು ಗಂಟೆ ಆಯಿತೋ ಎಂದು ಪರಿತಪಿಸುತ್ತಿದ್ದೆ..ಆದರೆ ಬೇರೆ ವಿಧಿಯಿರಲಿಲ್ಲ...ನಾನು ಬೆಂಗಳೂರಿಗೆ ಬರಲೇ ಬೇಕಾಗಿತ್ತು.....ಮತ್ತು ನನ್ನ ಬಸ್ ೧೦.೧೫ ಕ್ಕೆ ಹೊರದುವುದಿತ್ತು...ಹೀಗಾಗಿ ಅನಿವಾರ್ಯವಾಗಿ ನಮ್ಮ ಹರಟೆಯನ್ನು ಮುಗಿಸಲೇ ಬೇಕಾಯ್ತು...

ಹಿಂದೆ ಪ್ರಮೋದ್ ಕಾಗೆಗಳ ಹಿಂದೆ ಬಿದ್ದು..ಅವುಗಳ ಕುರಿತು ಆಳವಾದ ಅಧ್ಯಯನ ನಡೆಸಿ....ಅವುಗಳ ಮೇಲೆ ಸಾಲು ಸಾಲಾಗಿ ಕವನಗಳನ್ನು ಬರೆದ...ಗುಲ್ಬರ್ಗದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಕಾಗೆಯ ಕುರಿತಾಗಿ ಒಂದು ಕವನ ವನ್ನು ಓದಿ ಜಿ.ಎಸ.ಶಿವರುದ್ರಪ್ಪ, ಎಚ್ ಎಸ ರಾಘವೇಂದ್ರ ಮುಂತಾದ ಹಿರಿಯ ಕವಿಗಳನ್ನು ಬೆಚ್ಚಿ ಬೀಳಿಸಿದ ಪುಣ್ಯಾತ್ಮ ಈತ...

ಈಗ ಮಕ್ಕಳ ಕುರಿತಾಗಿ ಅಧ್ಯಯನ ನಡೆಸಿದ್ದಾನೆ ಮತ್ತು ಮಕ್ಕಳ ಮನಸ್ಸು, ಭಾವನೆಗಳ ಕುರಿತಾಗಿ ಅವನ ಕವನ ರಚನೆ ಸಹ ನಡೆದಿದೆ...ಅವುಗಳಲ್ಲಿ ಕೆಲವನ್ನು ನೆನ್ನೆ ನನ್ನ ಮುಂದೆ ಓದಿದಾಗ ನಾನು ನಿಜಕ್ಕೂ ವಿಸ್ಮಯ ಗೊಂಡೆ..ಅವುಗಳಲ್ಲಿ ಒಂದೆರಡನ್ನು ನಿಮ್ಮ ಮುಂದೆ ಹಂಚಿಕೊಳ್ಳುತ್ತಿರುವೆ...

೧. ಮಗುವಿನಂಬೆಗಾಲಿಗೆ
ವಿಶ್ವ
ಯಾವ ಲೆಕ್ಕ...

೨. ಮಗುವ ನಗುವಿಂದ
ಬೆಳಕು
ಕಡ ತೆಗೆದುಕೊಂಡಿದೆ...

೩. ಮಗುವಾಗಿಯೇ
ದೊಡ್ದವರಾದವರ ನಡುವೆ
ಮಗು ಮನುಷ್ಯರನ್ನು ಹುಡುಕುತ್ತಿದೆ....


ಎಂಥ ಅದ್ಭುತ ಕಲ್ಪನೆಯಿದೆ ಇಲ್ಲಿ...ಮಗುವಿನ ನಗುವಿಗೆ.... ಕೋಪಕ್ಕೆ...ತಾಪಕ್ಕೆ...ಎಲ್ಲದಕ್ಕೂ ಒಂದೊಂದು ಅರ್ಥವನ್ನು ಕಲ್ಪಿಸುವ ಪ್ರಯತ್ನ ನಡೆದಿದೆ...ಅವನ ಇನ್ನೊಂದು ಪದ್ಯದಲ್ಲಿ ಒಂದು ಸಾಲನ್ನು ಬಳಸುತ್ತಾನೆ..."ಮಗುವಿನ ಉಸುರಿನ ಶಾಪದಿಂದ..." ಎಂದು...ಅನೇಕ ಜನ ಇದಕ್ಕೆ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ....ಮಗು ಎಂದಾದರೂ ಶಾಪ ಹಾಕುವುದೇ ಎಂದು...ನಮ್ಮ ಚರ್ಚೆಗಳು ಹೀಗೆಯೇ ಸಾಗುತ್ತಿರುವಾಗ ನನಗೆ ಥಟ್ಟನೆ ನೆನಪಾಗಿದ್ದು ಪುಟ್ಟಣ್ಣ ಕಣಗಾಲ್ ನಿರ್ದೇಶನದ "ಗೆಜ್ಜೆ ಪೂಜೆ" ಚಿತ್ರದ

"ಮಗುವೆ ನಿನ್ನ ಹೂನಗೆ
ಒಡವೆ ನನ್ನ ಬಾಳಿಗೆ
ತುಂಬು ನನ್ನ ಜೋಳಿಗೆ..."

ಅದಕ್ಕೆ ಇರಬೇಕು ನಾವೆಲ್ಲಾ ಯಾವತ್ತು ಮಗುವಾಗಿಯೇ ಇರಲು ಬಯಸುವುದು.....

No comments:

Post a Comment