Tuesday, August 4, 2009

ಹೋರಾಟದ ಸಾಗರಕೆ ಸಾವಿರಾರು ನದಿಗಳು...


ರಂಗಭೂಮಿ ಒಂದು ಹೋರಾಟ...ಅದೊಂದು ತಪಸ್ಸು...ಯೋಗ....ಹಠ....ಸಾಧನೆ...ಎಷ್ಟೆಲ್ಲ ವ್ಯಾಖ್ಯಾನಗಳು...ಅದಕ್ಕೆ ರಂಗಭೂಮಿ ಒಂದು ತಂಡ ಕ್ರೀಯೆಯಾಗಲು ಸಾಧ್ಯವಾದದ್ದು ಮತ್ತು ದೃಶ್ಯ ಮಾಧ್ಯಮದಲ್ಲಿ ತನ್ನದೇ ಆದಂತಹ ಒಂದು ಛಾಪನ್ನು ಮೂಡಿಸಲು ಸಾಧ್ಯವಾದದ್ದು.....


ನಾಟಕ ಕಟ್ಟುವ ಕ್ರೀಯೆ...ಅದೆಂದಿಗೂ ನಿಂತ ನೀರಾಗಬಾರದು..ಅದಕ್ಕೆಂದೇ ನಾನು ಅದನ್ನು ಜಂಗಮ ಎಂದು ನಂಬಿರುವುದು...ಅದೆಂದಿಗೂ ಒಂದು ಸ್ಥಾವರವಾಗಲೇ ಬಾರದು...


ನಾನು ೧೯೯೭ ರಲ್ಲಿ ಪ್ರಜಾವಾಣಿ ಬಿಟ್ಟು ತೋರಣಗಲ್ಲಿನ ಜಿಂದಾಲ್ ವಿಜಯನಗರ ಉಕ್ಕು ಕಾರ್ಖಾನೆಗೆ ಸಾರ್ವಜನಿಕ ಸಂಪರ್ಕಾಧಿಕಾರಿಯಾಗಿ ಬಂದ ನಂತರ ಸುಮಾರು ಒಂದು ವರ್ಷಗಳ ಕಾಲ ನನ್ನ ಎಲ್ಲ ನಾಟಕ ಚಟುವಟಿಕೆಗಳು ನಿಂತೇ ಹೋಗಿದ್ದವು..ಆಕಸ್ಮಿಕವಾಗಿ ಕನ್ನಡ ಕಲಾ ಸಂಘಕ್ಕೆ ನಾಟಕ ನಿರ್ದೇಶನದ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಾಗ ಅದನ್ನು ಒಲ್ಲದ ಮನಸ್ಸಿನಿಂದಲೇ ಅಪ್ಪಿಕೊಂಡಿದ್ದೆ...ನಂತರ ಮುಂಬೈನಲ್ಲಿ ಪ್ರತಿ ವರ್ಷ ನಡೆಯುವ ಅಖಿಲ ಭಾರತ ಕುವೆಂಪು ಸ್ಮಾರಕ ಕನ್ನಡ ನಾಟಕ ಸ್ಪರ್ಧೆಯಲ್ಲಿ ದಫನ, ನಾಯೀಕತೆ, ರಾಕ್ಷಸ ಎಂಬ ಮೂರೂ ನಾಟಕಗಳನ್ನು ನಿರ್ದೇಶಿಸಿ, ಅವುಗಳಿಗೆ ವಿನ್ಯಾಸ ಹಾಗು ಸಂಗೀತ ಸಂಯೋಜನೆ ಮಾಡಿ ಮೂರೂ ವರ್ಷವೂ ಅನಾಮತ್ತಾಗಿ ಪ್ರಥಮ ಪ್ರಶಸ್ತಿ ಗಳಿಸಿ ಹ್ಯಾಟ್ರಿಕ್ ಪಡೆದದ್ದು ಈಗ ಇತಿಹಾಸ...ವಿಶೇಷವೆಂದರೆ ನಮ್ಮ ತಂಡ ಹ್ಯಾಟ್ರಿಕ್ ಪ್ರಶಸ್ತಿಯನು ಗಳಿಸಿದ ಹತ್ತು ವರ್ಷಗಳ ನಂತರವೂ ಆ ಸಾಧನೆಯನ್ನು ಇದುವರೆಗೆ ಯಾರು ಮುರಿದಿಲ್ಲ..ಅದಿನ್ನೂ ಕನ್ನಡ ಕಲಾ ಸಂಘದ ಹೆಸರಿನಲ್ಲಿಯೇ ಇದೆ...


ಈ ಎಲ್ಲ ಸಾಧನೆಗಳ ಹಿಂದೆ ಅನೇಕ ಕಲಾವಿದರ ತ್ಯಾಗ ಸಾಕಷ್ಟಿದೆ...ರಾಕ್ಷಸ ನಾಟಕ ಮಾಡುವಾಗ ಅದರಲ್ಲಿನ ಮುಖ್ಯ ಪಾತ್ರಧಾರಿ ಚಂದ್ರಶೇಖರ್ ತನ್ನ ಮನೆಯಲಿ ಒಡಹುಟ್ಟಿದ ತಂಗಿಯ ಮದುವೆಯನ್ನು ಸಹ ಲೆಕಿಸದೆ ನಾಟಕದಲ್ಲಿ ಭಾಗವಹಿಸಿ ಉತ್ತಮ ನಟ ಪ್ರಶಸ್ತಿಯನು ಪಡೆದದ್ದು.ಅವರು ಈ ನಾಟಕಕ್ಕೆ ಬರಬೇಕೆಂದರೆ ರಾಜಗೋಪಾಲ್ ಅವರು ಸ್ವಾಮಿಜಿಯ ಪೋಷಾಕಿನಲ್ಲಿ ಚಂದ್ರು ಮನೆಗೆ ತೆರಳಿ ಅವರ ತಂದೆಗೆ ಸುಳ್ಳು ಹೇಳಿ...ಮುಂಬೈನಲ್ಲಿ ಒಂದು ಕಂಪನಿಯಲ್ಲಿ ನಿಮ್ಮ ಮಗನಿಗೆ ಸಂದರ್ಶನಕ್ಕೆ ಕರೆ ಬಂದಿದೆ...ಅದರಲ್ಲಿ ಆಯ್ಕೆಯಾದರೆ ಕೈತುಂಬ ಸಂಬಳ ಸಿಗುತ್ತದೆ...ನಿಮ್ಮ ಮಗನ ಭಾವಿಸ್ಯ ಉಜ್ವಲವಾಗುತ್ತದೆ ಎಂದೆಲ್ಲ ಓಳು ಬಿಟ್ಟು ಅವರನ್ನು ಮುಂಬೈಗೆ ಕರೆದುಕೊಂಡು ಹೋದದ್ದಾಯ್ತು....ನಾಟಕದ ಪ್ರದರ್ಶನ ನಿಜಕ್ಕೂ ಅದ್ಭುತವಾಗಿತ್ತು....ನಾಟಕ ಮುಗಿದ ನಂತರ ಚಂದ್ರು ತನ್ನ ಬಾಲ್ಯ ಸ್ನೇಹಿತ ಗಿರಿಶನನ್ನು ಟೆರೇಸಿನ ಮೇಲೆ ಕರೆದುಕೊಂಡು ಹೋಗಿ..ಅವನ ತೊಡೆಯಮೇಲೆ ಅರ್ಧ ಗಂಟೆಯ ಕಾಲ ಅತ್ತಿದ್ದಾರೆ....ನಂತರ ಪ್ರಶಸ್ತಿ ಬಂದ ನಂತರ ಅವನ ತ್ಯಾಗಕ್ಕೆ ಒಂದು ನ್ಯಾಯ ಸಿಕ್ಕಂತಾಗಿ ಅಷ್ಟೆ ಸಂಭ್ರಮ ಪಟ್ಟಿದ್ದಾರೆ....


ಅದೇ ರೀತಿ ಅನೇಕ ಕಲಾವಿದರು ಈ ತಂಡದ ಮುನ್ನಡೆಗಾಗಿ ಅನೇಕ ಕೊಡುಗೆಗಳನ್ನು ನೀಡಿದ್ದಾರೆ ಮತ್ತು ಅವರಿನ್ನು ತಂಡದಲ್ಲಿ ಅಷ್ಟೆ ಸಕ್ರೀಯವಾಗಿ ಕೆಲಸ ಮಾಡುತ್ತಿದ್ದಾರೆ..


ಹತ್ತು ವರ್ಷದ ಹಿಂದೆ ಕನ್ನಡ ಕಲಾ ಸಂಘ ಹತ್ತರಲ್ಲಿ ಹನ್ನೊಂದು ಎನ್ನುವಂತೆ ಮತ್ತೊಂದು ಮಾಮೂಲಿ ತಂಡವಾಗಿತ್ತು...ಆದರೆ ಹತ್ತು ವರ್ಷಗಳ ಅವಧಿಯಲ್ಲಿ ಇದರ ಸಾಧನೆಯನ್ನು ನೋಡಿದವರಿಗೆ ಕನಿಷ್ಠ ಮಟ್ಟದ ಅಸುಯೇಯಾದರು ಆಗಲೇ ಬೇಕು..ತಮ್ಮದೇ ಆದ ಒಂದು ಸುಸಜ್ಜಿತವಾದ ಗ್ರಂಥಾಲಯ, ರಂಗಮಂದಿರ, ನಾಟಕಕ್ಕೆ ಬೇಕಾಗುವ ಎಲ್ಲ ರೀತಿಯ ಪರಿಕರಗಳು, ಬೆಳಕಿನ ವ್ಯವಸ್ಥೆ, ಧ್ವನಿ ವರ್ಧಕ ವ್ಯವಸ್ಥೆ ಎಲ್ಲವನ್ನು ತಮ ಸ್ವಂತ ಪರಿಶ್ರಮದಿಂದ ಕಟ್ಟಿಕೊಂಡಿದ್ದಾರೆ....ಅಕಾಡಮಿಯ ಪಟ್ಟಭದ್ರ ಹಿತಾಸಕ್ತಿಗಳು ಇಲ್ಲಿಗೆ ಬಂದಿದ್ದಾರೆ..ಇವರಿಂದ ಸಾಕಷ್ಟು ಆದರಾತಿಥ್ಯ ಸ್ವೀಕರಿಸಿ....ಬೆಟ್ಟದಂತಹ ಆಶ್ವಾಸನೆಗಳನ್ನು ನೀಡಿ ಹೋಗಿದ್ದಾರೆ...ಆದರೆ ಅವರು ಏನು ಮಾಡಿಲ್ಲ...."ಅಕ್ಕ ಸತ್ತರೆ ಅಮಾವಾಸ್ಯೆ ನಿಲ್ಲಲಾರದು" ಎಂಬ ಮಾತಿನಂತೆ ತಂಡ ಕಳೆದ ೩೦ ವರ್ಷಗಳಿಂದ ಬಿ.ಚಿ ಜನ್ಮ ದಿನಾಚರಣೆಯನ್ನು, ಕಳೆದ ಹತ್ತು ವರ್ಷಗಳಿಂದ ಕೈಲಾಸಂ ದಿನಾಚರಣೆಯನ್ನು, ಪ್ರತಿವರ್ಷ ಮಕ್ಕಳಿಗಾಗಿ ಚಿನಾರ ಎಂಬ ನಾಟಕ ಸ್ಪರ್ಧೆಯನ್ನು ಮತ್ತು ವರ್ಷಕ್ಕೊಂದು ಪೂರ್ಣಪ್ರಮಾಣದ ನಾಟಕವನ್ನು ತಪ್ಪದೆ ಮಾಡುತ್ತಾ ಬಂದಿದೆ...


ಇದರ ಹಿಂದಿನ ಪ್ರೇರಕ ಶಕ್ತಿಗಳು ಅನೇಕ...ಯಾರ ಹೆಸರನ್ನು ಬಿಡುವಂತಿಲ್ಲ...ಆದರೆ ಕೆಲವನ್ನಿಲ್ಲಿ ನೆನಪಿಸಿ ಕೊಳ್ಳಲೆ ಬೇಕು...ರಾಮಪುರ ಬದರಿ ನಾರಾಯಣ, ರಾ.ಸಿ. ಕುಲಕರ್ಣಿ, ಸದಾನಂದ್, ಮುಂತಾದವರು ತಮ್ಮ ಜೀವವನ್ನೇ ತೆಯ್ದಿದ್ದಾರೆ....


ಇಂತಹ ಹೋರಾಟದ ಸಾಗರಕೆ ಸಾವಿರಾರು ನದಿಗಳು ಬಂದು ಸೇರಿವೆ...ಅವುಗಳಲ್ಲಿ ಕೆಲವರನ್ನು ಭೇಟಿಯಾಗಲು ಈ ಕೆಳಗಿರುವ ಲಿಂಕ್ ಕ್ಲಿಕ್ಕಿಸಿ....



1 comment:

  1. ಕನ್ನಡ ರಂಗ ಭೂಮಿಯ ವೃದ್ಧಿಯಲ್ಲಿ ನಿಮ್ಮ ಸಂಘ ಮಾಡುತ್ತಿರುವ ಕಾರ್ಯ ಚಟುವಿಟಿಕೆಗಳು ತುಂಬಾ ಶ್ಲಾಘನೀಯ ....ಇದರ ಹಿಂದೆ ಸಹಸ್ರಾರು ಕಲಾವಿದರ ತ್ಯಾಗ ಮತ್ತು ಪರಿಶ್ರಮ ಮರೆಯಬಾರದು ಎಂಬ ತಮ್ಮ ಲೇಖನ ಖಾರವಾದ ಸತ್ಯಾಂಶ ಸಾರುತ್ತೆ . ಮುಂಬೈ ಮತ್ತು ಇತರ ಹೊರರಾಜ್ಯ ಪಟ್ಟಣಗಳಲ್ಲಿ ಹೊರನಡ ಕನ್ನಡಿಗರ ಸೇವೆಯಲ್ಲಿ ನಿರತ ನಿಮ್ಮ ಪ್ರಯಾಸ (endeavor) ನಿಜಕ್ಕೂ ಪ್ರಶಂಸನಿಯ.

    ReplyDelete