Thursday, July 9, 2009

ಬ್ಲಾಗ್ ನಲ್ಲಿ ಬರೆದದ್ದಕ್ಕೆ ಮಾನ ಹಾನಿ ಖಟ್ಲೆ!!!!

ನನ್ನ ಬ್ಲಾಗನ್ನು ಅನೇಕ ಜನ ಓದುತ್ತಿದ್ದಾರೆ ಮತ್ತು ನನಗೆ ಫೋನಾಯ್ಸಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿ...ಸರ್ ತುಂಬಾ ಚೆನ್ನಾಗಿವೆ ನಿಮ್ಮ ಅನುಭವಗಳು ಮತ್ತೆ ಮತ್ತೆ ಬರೆಯಿರಿ ಎಂಬ ಮಾತುಗಳನ್ನು ಹೇಳುತ್ತಿರುತ್ತಾರೆ...


ಅದೇ ರೀತಿ ನನ್ನ ಸ್ನೇಹಿತನೊಬ್ಬನಿಗೆ ನನ್ನ ಬ್ಲಾಗನ್ನು ನೋಡಿ ತನ್ನ ಅಭಿಪ್ರಾಯವನ್ನು ತಿಳಿಸುವಂತೆ ಹೇಳಿದೆ..ಮತ್ತು ಅದರಲ್ಲಿ ಕೆಲವು ಕಡೆ ಅವನ ಹೆಸರನ್ನು ಬಳಸಿರುವುದಾಗಿಯೂ ಹೇಳಿದೆ...ಅದಕ್ಕವನು ಥಟ್ಟನೆ "ಇದರಿಂದ ನನಗ..ನನ್ನ ಕೆಲಸಕ್ಕ ಏನು ತ್ರಾಸ್ ಆಗುದಿಲ್ಲ ಹೌದಲ್ಲೋ" ಎಂದ....ತುಸು ಕಾಲ ನಕ್ಕು "ಏನೂ ಆಗುದಿಲ್ಲ...ಸುಮನ ಓದಿ ನಿನ್ನ ಅಭಿಪ್ರಾಯ ತಿಳಿಸು ಅಂದೆ...


ಕೆಲ ದಿನಗಳ ನಂತರ ಅವನನ್ನು ಮತ್ತೆ ಸಂಪರ್ಕಿಸಿ.. "ನನ್ನ ಬ್ಲಾಗ್ ಓದಿದ್ಯಾ?" ಅಂದೆ..ಅದಕ್ಕವನು "ಇಲ್ಲ ಬ್ಯುಸಿ ಆಗೆನಿ...ಓದ್ತೀನಿ" ಅಂದ...ನಾನು ಅವನಿಗೆ ಬ್ಲಾಗ್ನಲ್ಲಿ ಬರೆದ ಕೆಲವು ವಿಷಯಗಳನ್ನು ಹೇಳಿದೆ...ಅದಕ್ಕವನು ತಕ್ಷಣ "ಹಿಂಗ ಬಂಡುನ ಮ್ಯಾಲ ಹಿಂಗೆಲ್ಲ ಬರದ್ರ ಅವ ನಿನ್ನ ಮ್ಯಾಲೆ ಮಾನ ಹಾನಿ ಖಟ್ಲೆ ಹಾಕತಾನ... ಸ್ವಲ್ಪ ಹುಷಾರಾಗಿರು ಎಂದ" ನನಗೆ ನಗು ತಡೆಯಲಾಗಲಿಲ್ಲ..ತಕ್ಷಣ ಬಂಡುಗೆ ಫೋನ್ ಮಾಡಿ ಈ ವಿಷಯವನ್ನು ತಿಳಿಸಿದಾಗ ಇಬ್ಬರು ಹೊಟ್ಟೆ ಹುಣ್ಣಾಗುವಷ್ಟು ನಕ್ಕೆವು....


ನಂತರ ಮತ್ತೆ ಆ ಗೆಳೆಯ ನನ್ನೊಂದಿಗೆ ಚರ್ಚಿಸುತ್ತ..."ನೀ ನಿನ್ನ ಬ್ಲಾಗನ್ನು ಬಾರೆ ಬಂಡುನ್ನ ಗೇಲಿ ಮಾಡಲಿಕ್ಕೆ ಬಳಸಿಕೊಂಡಿ...ಅದನ್ನ ಬಿಟ್ಟು ಬ್ಯಾರೆ ಏನಾರ ಬರೀ ಎಂದ..." ಬಹುಶಃ ಅವನು ನನ್ನ ಉದ್ದೇಶವನ್ನು ಸರಿಯಾಗಿ ಅರ್ಥ ಮಾಡಿ ಕೊಂಡಿಲ್ಲ ಎನ್ನುವುದು ಸ್ಪಷ್ಟವಾಗಿತ್ತು...ಬಂಡುನ ಪ್ರಸಂಗಗಳನ್ನು ಬರೆಯುವಾಗ ನಾನು ಮೊದಲೇ ಸ್ಪಷ್ಟವಾಗಿ ತಿಳಿಸಿದ್ದೆ...ಬಂಡು ಎಂದಿಗೂ ನಗೆಪಾಟಲಿನ ವ್ಯಕ್ತಿಯಾಗಿ ನಮಗೆ ಕಂಡಿಲ್ಲ...ಬಹುಶಃ ನಮ್ಮ ಗೆಳೆತನದ ಸಲುಗೆ, ಪ್ರೀತಿ ವಿಶ್ವಾಸಗಳೇ ಅವನೊಂದಿಗೆ ಈ ರೀತಿಯ ಸಲುಗೆಗೆ ಕಾರಣ ಎಂದು....


ನಮ್ಮ ನೆನಪುಗಳನ್ನು ನಾವಲ್ಲದೆ ಮತ್ಯಾರು ಬಿಚ್ಚಿಡಲು ಸಾಧ್ಯ?...


ಅದಕ್ಕೆ ಇರಬೇಕು ಜಯಂತ್ ಕಾಯ್ಕಿಣಿ ಬರೆದದ್ದು.."ಮಳೆ ನಿಂತು ಹೋದ ಮೇಲೆ ಹನಿಯೊಂದು ಮೂಡಿದೆ ...ಮಾತೆಲ್ಲ ಮುಗಿದ ಮೇಲೆ ದನಿಯೊಂದು ಕಾಡಿದೆ...."

No comments:

Post a Comment