Sunday, July 12, 2009

ಹುಚ್ಚರ ಸಂತೆಯಲ್ಲಿ ವಿವೇಕದ ಅಳು.....


ಭಾರತ ಪಾಕಿಸ್ಥಾನ ವಿಭಜನೆಯ ನಂತರ ಅನೇಕ ಕಥೆಗಾರರು ಹುಟ್ಟಿಕೊಂಡರು.....ಅನೇಕ ಕಥೆಗಳು ಹುಟ್ಟಿಕೊಂಡವು..... ಅಂತಹ ಅನೇಕ ಕಥೆಗಳನ್ನು ನಾನು ಓದಿದ್ದೇನೆ ಮತ್ತು ಅವುಗಳಲ್ಲಿ ನನಗೆ ಅತ್ಯಂತ ತಲೆ ಕೆಡಿಸಿದ ಕಥೆಗಾರನೆಂದರೆ ಸಾದತ್ ಹಸನ್ ಮಂಟು.... ಅಂದಿನ ಸಾಮಾಜಿಕ ಜೀವನ ಅದರ ಮೇಲೆ ಆಗುವ ಪರಿಣಾಮಗಳು ಮುಂತಾದವುಗಳು ಇವರ ಕಥೆಯಲ್ಲಿ ಎಷ್ಟು ಪರಿಣಾಮಕಾರಿಯಾಗಿ ಮೂಡಿಬಂದಿವೆ ಎಂದರೆ ಪ್ರತಿಯೊಂದು ಓದಿಗೂ ಸಹ ಹೊಸ ಪರಿಕಲ್ಪನೆ ಮೂಡಿಬರುತ್ತದೆ...ಹೊಸ ದೃಷ್ಟಿಕೋನ ಸಿಗುತ್ತದೆ...


ಹೀಗೆ ಎರಡು ವರ್ಷದ ಹಿಂದೆ "ವಿಜಯ ಕರ್ನಾಟಕ" ಪತ್ರಿಕೆಯನ್ನು ಓದುತ್ತಿದ್ದಾಗ ಅದರಲ್ಲಿ ಪುಸ್ತಕ ವಿಮರ್ಶಾ ವಿಭಾಗದಲ್ಲಿ ಸಾದತ್ ಹಸನ್ ಮಂಟು ಅವರ ಕಥಾ ಸಂಕಲನವನ್ನು ಕುರಿತು ಬರೆಯಲಾಗಿತ್ತು ಮತ್ತು ಅದರ ಹೆಸರು "ಸದ್ಯಕಿದು ಹುಚ್ಚರ ಸಂತಿ" ಎಂದು...ಅವರ ಅನೇಕ ಕಥೆಗಳನ್ನು ಕನ್ನಡಕ್ಕೆ ತರುವ ಸ್ತುತ್ಯಾರ್ಹ ಕೆಲಸವನ್ನು ಮಾಡಿದವರು ಸಾಹಿತಿ ಹಸನ್ ನಯೀಮ್ ಸುರಕೊಡ್ ಅವರು...ಅದರ ಪ್ರಕಾಶನದ ಹೊಣೆಯನ್ನು ಹೊತ್ತವರು ಬಳ್ಳಾರಿಯ ಲೋಹಿಯಾ ಪ್ರಕಾಶನದವರು...ತಕ್ಷಣ ಬೆಂಗಳೂರಿನ ಎಲ್ಲ ಪುಸ್ತಕದ ಮಳಿಗೆಗಳಿಗೆ ಭೇಟಿ ನೀಡದರು ಈ ಪುಸ್ತಕ ಸಿಗಲಿಲ್ಲ...


ಹೊಸಪೇಟೆಯ ಗೆಳೆಯ ರಾಜು ಕುಲಕರ್ಣಿಗೆ ತಕ್ಷಣ ಫೋನಾಯಿಸಿ ಈ ಪುಸ್ತಕ ನನಗೆ ಯಾವುದೇ ಪರಿಸ್ಥಿತಿಯಲ್ಲಿ ಬೇಕೆ ಬೇಕು ಎಂದು ಹೇಳಿದೆ...ಮುಂದೆ ೩ ದಿನದಲ್ಲಿ ಆ ಪುಸ್ತಕದ ಎರಡು ಪ್ರತಿಗಳು ನನ್ನ ಮುಂದಿದ್ದವು...ಒಂದೇ ಗುಟುಕಿಗೆ ಇಡೀ ಪುಸ್ತಕವನ್ನು ಅನಾಮತ್ತಾಗಿ ಓದಿಮುಗಿಸಿದಾಗ ರಾತ್ರಿ ೩ ಗಂಟೆಯ ಸಮಯ..ಆಗಲೇ ನಿರ್ಧರಿಸಿಯಾಗಿತ್ತು..ಆ ವರ್ಷದ ಮುಂಬೈ ನಾಟಕೋತ್ಸವಕ್ಕೆ ಈ ಕಥೆಗಳನ್ನು ಆಧರಿಸಿದ ನಾಟಕವನ್ನೇ ಕೈಗೆತ್ತಿಕೊಳುವುದು ಎಂದು..


ಅಂತೆಯೇ ನಾಟಕದ ಹಸ್ತಪ್ರತಿಯು ಸಹ ಸಿದ್ಧವಾಯ್ತು...ಅದರ ಮುಖ್ಯ ಪಾತ್ರಧಾರಿಯ ಅಭಿನಯದ ಜವಾಬ್ದಾರಿಯನ್ನು ಚಂದ್ರಶೇಖರ್ ಅವರಿಗೆ ವಹಿಸಿದ್ದೆ...ಎಂತಹ ಪಾತ್ರವನ್ನಾದರು ಅತ್ಯಂತ ಶೃದ್ಧೆಯಿಂದ, ತನ್ಮಯತೆಯಿಂದ ಅಭಿನಯಿಸಬಲ್ಲರು ಎಂಬ ನಂಬಿಕೆಯೇ ಇದಕ್ಕೆ ಕಾರಣವಿರಬಹುದು....


ನಾಟಕದ ತಯಾರಿ ಆರಂಭವಾಯ್ತು..ಕೇವಲ ಒಂದೇ ದಿನದಲ್ಲಿ ಇಡೀ ನಾಟಕದ ಹಂದರ ಸಿದ್ಧವಾಗಿ ಹೋಯ್ತು....ಮುಂದೊಂದು ದಿನ ನಾನು ಬೆಂಗಳೂರಿನಿಂದ ಹೊಸಪೇಟೆಗೆ ಬಂದಾಗ ಎಲ್ಲ ಕಲಾವಿದರಿಗೆ ನಾಟಕದ ತಯಾರಿ ಇಡೀ ದಿನ ಇರುವುದಾಗಿಯೂ ಎಲ್ಲರು ಇಡೀ ದಿನ ಇದಕ್ಕಾಗಿಯೇ ಬಿಡುವು ಮಾಡಿಕೊಳ್ಳತಕ್ಕದ್ದು ಎಂದು ತಾಕೀತು ಮಾಡಿದ್ದೆ....


ಅಂದಿನ ನಾಟಕದ ತಾಲಿಮಿಗೆ ಚಂದ್ರಶೇಖರ್ ತಮ್ಮ ಮಗ ವಿವೇಕನನ್ನು ಕರೆದು ತಂದಿದ್ದರು..ಅವನಿಗೆ ಆಗ ಕೇವಲ ೪ ವರ್ಷ ವಯಸ್ಸು....ನಾಟಕದ ತಾಲೀಮು ಶುರು ಆಯ್ತು.....ಅದರಲ್ಲಿ ಒಂದು ದೃಶ್ಯ ಬರುತ್ತದೆ...ಸಿರಾಜುದ್ದೀನನ ಮಗಳನ್ನು ಕೆಲವು ಯುವಕರು ನಂಬಿಸಿ, ಅಪಹರಿಸಿ ಅವಳ ಮೇಲೆ ಅತ್ಯಾಚಾರವೆಸಗಿರುತ್ತಾರೆ...ಅವಳು ಜೀವನದಲ್ಲಿ ಎಷ್ಟೊಂದು ಮೆಕ್ಯಾನಿಕಲ್ ಆಗಿರುತ್ತಾಳೆಂದರೆ ಅವಳ ಹತ್ತಿರ ಯಾರೇ ಬಂದರು ಸಹ ಅವರು ತನ್ನನ್ನು ಅನುಭವಿಸಲು ಬಂದವರೇ ಎಂದು ತಿಳಿದು ಆ ಕ್ರೀಯೆಗೆ ಸಜ್ಜಾಗಿಬಿಡುತ್ತಾಳೆ.... ಒಂದು ದಿನ ಅ ಯುವಕರ ಗುಂಪೊಂದು ತಂದು ಅವಳು ಸತ್ತಿದಾಳೆಂದು ತಿರ್ಮಾನಿಸಿ ಅವಳನ್ನು ಶವಾಗಾರಕ್ಕೆ ತಂದು ಹಾಕಿ ಹೋಗುತ್ತಾರೆ...ಅಲ್ಲಿ ತನ್ನ ಮಗಳನ್ನು ಹುಡುಕುತ್ತ ಬಂದ ಸಿರಾಜುದ್ದೀನನಿಗೆ ತನ್ನ ಮಗಳು ಈ ಸ್ಥಿತಿಯಲ್ಲಿ ಇರುವುದು ನೋಡಿ ಅಳಲು ಆರಂಭಿಸುತ್ತಾನೆ...ಚಂದ್ರಶೇಖರ್ ಅವರ ಅಭಿನಯ ಅದ್ಭುತವಾಗಿತ್ತು..ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡು ಅಭಿನಯಿಸಿದ ರೀತಿ ನಿಜಕ್ಕೂ ಅದ್ಭುತ...ಈ ಎಲ್ಲ ತಾಲೀಮನ್ನು ವಿವೇಕ ತದೇಕ ಚಿತ್ತದಿಂದ ನೋಡುತ್ತಾ ಕುಳಿತಿದ್ದ....ಅವನು ಎಲ್ಲವನ್ನು ಸುಮ್ಮನೆ ನೋಡುತ್ತಿದ್ದಾನೆ....ಅಳುತ್ತಿದಾನೆ...ಮಾತಿಲ್ಲ....ಧ್ವನಿಯನ್ನು ಬಿಡುತ್ತಿಲ್ಲ...ಕಣ್ಣಲ್ಲಿ ನೀರು ಮಾತ್ರ ಬರುತ್ತಿದೆ....ನಾಲ್ಕು ವರ್ಷದ ಮಗುವಿಗೆ ಈ ನಾಟಕ ಅಷ್ಟೊಂದು ಮನಸ್ಸಿಗೆ ನಾತಿತಾ...ಅಥವಾ ಅವರ ಅಪ್ಪ ಆ ಪಾತ್ರದಲ್ಲಿ ಅಭಿನಯಿಸಿ, ಅಳುತ್ತಿರುವುದರಿಂದ ಅವನು ಅಳುತ್ತಿದ್ದಾನಾ...ಗೊತ್ತಿಲ್ಲ....ನಾಟಕದ ಯಶಸ್ಸು ಅಡಗಿರುವುದೇ ಇಲ್ಲಿ....


ಅಂತೆಯೇ ನಾನು ನಾಟಕದುದ್ದಕ್ಕೂ ಜಗಜಿತ್ ಸಿಂಗ್ ಅವರು ಹಾಡಿರುವ ಗಜಲ್ "ಜಾತೆ ಜಾತೆ ವೋ ಮುಜ್ಹೆ ಅಚ್ಚಿ ಕಹಾನಿ ದೇ ಗಯೀ.." ಬಳಸಿದ್ದು....


No comments:

Post a Comment