Tuesday, July 21, 2009

ಮೂರ್ಖತನದ ಪರಮಾವಧಿ.....








ಧಾರವಾಡ ಜಿಲ್ಲೆಯ ಕುಂದಗೋಳದಲ್ಲಿ ಪ್ರತಿವರ್ಷ ನಡೆಯುವ ಸವಾಯಿ ಗಂಧರ್ವರ ಪುಣ್ಯತಿಥಿ ಹಾಗೂ ಅದರ ಅಂಗವಾಗಿ ನಡೆಯುವ ಅಹೋರಾತ್ರಿ ಸಂಗೀತ ಕಾರ್ಯಕ್ರಮ ನಿಜಕ್ಕೂ ಅವಿಸ್ಮರಣೀಯ...ಈಗ ಐದು ವರ್ಷಗಳ ಹಿಂದೆ ಧಾರವಾಡದಲ್ಲಿ ನಮ ಗೆಳೆಯರೆಲ್ಲ ಸೇರಿ ಕುಂದಗೋಳದ ಈ ಕಾರ್ಯಕ್ರಮಕ್ಕೆ ಹೋಗುವುದೆಂದು ನಿರ್ಧರಿಸಿ, ಅದಕ್ಕೆ ಹೊರಡಲನುವಾದಾಗ ಧಾರವಾಡದ ನಮ್ಮ ಪತ್ರಕರ್ತ ಮಿತ್ರನೊಬ್ಬ ತಾನು ಸಹ ಅದಕ್ಕೆ ಬರುವೆನೆಂದು ಹೇಳಿದ....ನಾವು ಸರಿಎಂದು ಅವನನ್ನು ಕರೆದುಕೊಂಡು ೫-೬ ಜನರ ಗುಂಪು ಕುಂದಗೊಳದತ್ತ ಪ್ರಯಾಣ ಬೆಳೆಸಿದೆವು...ಮುಂಬೈ, ಪುನಾ ಮುಂತಾದ ಕಡೆಗಳಿಂದ ಖ್ಯಾತ ಸಂಗೀತಗಾರರು ಆ ವರ್ಷ ಅಲ್ಲಿ ತಮ್ಮ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದರು..ಅಲ್ಲದೆ ಗಂಗಜ್ಜಿ ಸಹ ಅಲ್ಲಿ ಬಂದು ತಮ್ಮ ಸಂಗೀತ ಕಾರ್ಯಕ್ರಮವನ್ನು ನೀಡಲಿದ್ದರು... ಅವರ ದೇಹಸ್ಥಿತಿ ಈಗ ಮೊದಲಿನಂತಿಲ್ಲ..ಅವರ ಹಾಡನ್ನು ಮುಂದೆ ನಮಗೆ ವೇದಿಕೆಯ ಮೇಲೆ ಕೇಳಲು ಸಿಗುತ್ತದೆಯೋ ಇಲ್ಲವೊ ತಿಳಿಯದು...ಈಗಲೇ ಹೋಗಿಬರುವುದು ಉತ್ತಮ ಎಂದು ನಾವೆಲ್ಲಾ ಅಲ್ಲಿಗೆ ತೆರಳಿದ್ದೆವು...

ನಮ್ಮೊಂದಿಗೆ ಬಂದ ಆ ಪತ್ರಕರ್ತ ಮಿತ್ರ ತೀರಾ ಬಾಯಿ ಬಡುಕ...ತನಗೇನು ಗೊತ್ತಿಲ್ಲದಿದ್ದರೂ ಎಲ್ಲಾ ತಿಳಿದಿದೆ ಎಂದು ಭಾವಿಸಿರುವ ಕುಪಮಂಡುಕ...ಆ ದಿನವು ಹೀಗೆಯೇ ಆಯಿತು....ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು...ನಾವು ಮಧ್ಯದ ಬಿಡುವಿನಲ್ಲಿ ಚಹಾ ಕುಡಿಯಲೆಂದು ಹೋದರೆ ಬಂದಾಗ ಅಲ್ಲಿ ಗಂಗಜ್ಜಿ ಎಲ್ಲರೊಂದಿಗೆ ಮಾತನಾಡುತ್ತಾ ಕಾರ್ಯಕ್ರಮಕ್ಕೆ ಹಾಜರಾಗುತ ತರಾತುರಿಯಲ್ಲಿದ್ದೆವು...ನಾನು ಹೋಗಿ ಅವರಿಗೆ ನಮಸ್ಕರಿಸಿದೆ...ಅವರು ನಮಗೆ ತೀರಾ ಪರಿಚಯದವರು..ನಮ್ಮ ಅಜ್ಜ ಗುರುರಾವ್ ದೇಶಪಾಂಡೆ ಹಾಗೂ ಚಿದಂಬರ್ ದೇಶಪಾಂಡೆ ಉತ್ತಮ ಹಿಂದುಸ್ತಾನಿ ಸಂಗೀತಗಾರರಾಗಿದ್ದವರು...ಗಂಗಜ್ಜಿ ಹಾಗೂ ನಮ್ಮ ಅಜ್ಜ ಏಕ ವಚನದಲ್ಲಿ ಮಾತನಾಡುವಷ್ಟು ಸಲುಗೆ ಇತ್ತು...ನಾನು ನಮಸ್ಕರಿಸಿದ ಕೂಡಲೇ ಅತ್ಯಂತ ಪ್ರೀತಿಯಿಂದ ನನ್ನ ತಲೆ ನೇವರಿಸಿ..ನನ್ನ ಆರೋಗ್ಯದ ಬಗ್ಗೆ ವಿಚಾರಿಸಿದರು..ಸಂಗೀತ ಕಾರ್ಯಕ್ರಮ ಹೇಗೆ ನಡೆಯುತ್ತಿದೆ, ಯಾವ ಸಂಗೀತಗಾರರು ತಮ್ಮ ಕಾರ್ಯಕ್ರಮ ನೀಡಿದರು ಮುಂತಾದವುಗಳನ್ನು ಮಾತನಾಡುತ್ತಿದ್ದಂತೆಯೇ...ನಮ್ಮ ಪತ್ರಕರ್ತ ಮಿತ್ರ ಮಧ್ಯದಲ್ಲಿ ತನ್ನ ಬಾಯಿಯನ್ನು ತೂರಿಸಿ.."ಎ ಬಿಡ್ರಿ ನಾವಿಲ್ಲೇ ಕ್ಲಾಸಿಕಲ್ ಮ್ಯುಸಿಕ್ ಕೆಳಬೇಕಂತ ಬಂದ್ರ ಅವರ್ಯಾರೋ ಮುಂಬೈನವರು ಆವಾಗ್ನಿಂದ ಹಿಂದುಸ್ತಾನಿ ಸಂಗೀತ ಹಾಡಾಕತ್ತಾರ" ಎಂದು ಬಿಡಬೇಕೇ? ನನಗೆ ಮೈ ಪರಚಿ ಕೊಳ್ಳುವುದೊಂದೇ ದಾರಿ...ಏನು ಮಾತನಾಡ ಬೇಕೆಂದು ತೋಚದೆ ಬೆಪ್ಪನಂತೆ ನಿಂತಾಗ ಗಂಗಜ್ಜಿ ಎಂದಿನಂತೆ ನಗುತ್ತ ಸಭಾಂಗಣವನ್ನು ಪ್ರವೇಶಿಸಿದರು.....

No comments:

Post a Comment